ಬೆಳಗಾವಿ :–
ಮಹಾರಾಷ್ಟ್ರ ರಾಜ್ಯದ ಮುಂಬೈನ ಘಾಸ್ಕೋಪರ್ ಈಸ್ಟ್ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ, ತಮ್ಮ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಭಿಕ್ಷುಕನ ವೇಷ ಧರಿಸಿ ಬೀದಿ, ರಸ್ತೆ ರಸ್ತೆಗಳಲ್ಲಿ ಭಿಕ್ಷೆ ಬೇಡಿದ್ದಾರೆ.
ಜೈನ ಧರ್ಮದ ಚಾತುರ್ಮಾಸದ ಅಂಗವಾಗಿ ಆತ್ಮಾನುಭವ ಪಡೆಯಲು ಅವರು ಈ ರೀತಿ ಮಾಡಿದ್ದು, ಮುಖಕ್ಕೆ ವಿಶೇಷ ಮೇಕಪ್ ಮಾಡಿಕೊಂಡು,
ಹರಿದ-ಸಾಧಾರಣ ಬಟ್ಟೆಗಳನ್ನು ಧರಿಸಿ ಭಿಕ್ಷುಕನ ರೂಪ ತಳೆದಿದ್ದರು. ಜನರಿಂದ ಸಿಕ್ಕ ಭಿಕ್ಷೆಯ ಹಣ ಹಾಗೂ ಆಹಾರವನ್ನೇ ಸೇವಿಸಿದ ಅವರು, ಭಿಕ್ಷುಕನ ಕಷ್ಟಗಳನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ.




