ವರದಿ : ಮಿಯಾಲಾಲ ಕಿಲ್ಲೇದಾರ
ಕಾಗವಾಡ :–
ಬೇಸಿಗೆ ಕಾಲದಲ್ಲಿ ಜನಜಾನುವಾರು ಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಮನಗೊಂಡು 2 ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಸನ್ಮಾನ್ಯ ಶ್ರೀ ದೇವೇಂದ್ರ ಪಡ್ನವಿಸ್ ಅವರನ್ನು ಮಾಡಿ ಸಚಿವರು ಹಾಗೂ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ ಪಾಟೀಲ ಅವರು ಹಾಗೂ ಮಾಜಿ ಜಲ ಸಂಪನ್ಮೂಲ ಸಚಿವರಾದ ಸನ್ಮಾನ ಶ್ರೀ ರಮೇಶ್ ಜಾರಕಿಹೊಳಿ
ಅವರು ಭೇಟಿಯಾಗಿ ಕೊಯ್ಯಾ ಡ್ಯಾಮ್ ನಿಂದ ಕೃಷ್ಣಾ ನದಿಗೆ ಮೂರು ಟಿಎಂಸಿ ನೀರು ಅಡುಗಡೆಗೊಳಿಸುವಂತೆ ಮನವಿ ಮಾಡಿದರು.
ಅಂದು ಸನ್ಮಾನ್ಯ ನೀರಾವರಿ ಸಚಿವರು 2 ದಿನದಲ್ಲಿ ನೀರು ಅಡುಗಡೆಗೊಳಿಸುತ್ತೇವೆ ಎಂದು ಹೇಳಿದರು, ನಮ್ಮ ರೈತ ನಾಯಕರ ಮನವಿಗೆ ಸ್ಪಂದಿಸಿ ಇವತ್ತು ಕೊಯ್ಯಾ ಡ್ಯಾಮ್ ನಿಂದ ನೀರು ಬಿಡುಗಡೆ ಗೊಳಿಸಿದ್ದು, ರಾಜಾಪುರ ಧರನದಿಂದ ಕೃಷ್ಣಾ ನದಿಗೆ ನೀರು ಹರಿದ್ದು ಬಂದಿದ್ದು, ರಾಜಾಪುರ ಧರಣದ ಸ್ಥಳಲ್ಲಿ ಮಾ ಸಚಿವರು ಹಾಗೂ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ ಪಾಟೀಲ ಅವರು ಭೇಟಿ ನೀಡಿ ವೀಕ್ಷಣೆ ಮಾಡಿ, ಸನ್ಮಾನ್ಯ ಜಲ ಸಂಪನ್ಮೂಲ ಸಚಿವರಿಗೆ ಸಮಸ್ಯೆ ನಮ್ಮ ಕಾಗವಾಡ ಮತಕ್ಷೇತ್ರದ ರೈತರ ಪರವಾಗಿ ಅಭಿನಂದನೆಗಳನ್ನು ಕೋರಿದರು.
+ There are no comments
Add yours