“ಆಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯ 25 ಎಕರೆ ಜಾಗದಲ್ಲಿ ಆಲದ, ಬೇವು, ಅರಳಿ, ವಿವಿಧ ಬಗೆಯ ಮರಗಳನ್ನು ನೆಡುವ ಕಾರ್ಯಕ್ರಮ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ನಿಪ್ಪಾಣಿ :–

ಹಸಿರೇ ಉಸಿರು..ಗಿಡ ಬೆಳೆಸಿ ನಾಡು ಉಳಿಸಿ!

ನಿಪ್ಪಾಣಿ ಮತಕ್ಷೇತ್ರದ ಆಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯ 25 ಎಕರೆ ಜಾಗದಲ್ಲಿ ಆಲದ, ಬೇವು, ಅರಳಿ, ವಿವಿಧ ಬಗೆಯ ಮರಗಳನ್ನು ನೆಡುವ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಚಾಲನೆ ನೀಡಿ, ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಪ್ರಕೃತಿ ಮಾತೆಯ ಮಡಿಲಲ್ಲಿರುವ ನಾವು ಗಿಡಗಳನ್ನು ನೆಟ್ಟು, ಅದನ್ನು ಪೋಷಿಸಬೇಕು. ಈ ನಿಟ್ಟಿನಲ್ಲಿ ಆಡಿ ಮಲ್ಲಯ್ಯ ಗುಡ್ಡದಲ್ಲಿ 2500 ಸಸಿ ನೆಡುವುದು ಮತ್ತು ನಿಪ್ಪಾಣಿ ಮತಕ್ಷೇತ್ರದಲ್ಲಿ ಸುಮಾರು 25,000 ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದೇವೆ. ಹಸಿರನ್ನು ಉಸಿರಾಗಿಕೊಂಡು, ಮನುಕುಲದ ಒಳಿತಿಗಾಗಿ ಪರಿಸರ ಸಂರಕ್ಷಿಸೋಣ.

ಈ ಸಂದರ್ಭದಲ್ಲಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಾದ ಶ್ರೀ ಪ್ರಶಾಂತ ಗೌರಾನಿ,ಶ್ರೀ ಶಲ್ವರಾಜ ನಾಯ್ಕರ,ಸ್ಥಳೀಯ ಮುಖಂಡರು, ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours