“ಸಿ ಎಂ ಸಿದ್ದರಾಮಯ್ಯ ರಾಜಕೀಯದ ಕೊನೆಗಾಲದಲ್ಲಿದ್ದಾರೆ ಸತೀಶ್ ಜಾರಕಿಹೊಳಿ ಯವರು ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಮರ್ಥರಿದ್ದಾರೆ” : ಯತೀಂದ್ರ

ಬೆಳಗಾವಿ :–

ನಮ್ಮ ತಂದೆಯಾದ, ಸಿ ಎಂ ಸಿದ್ದರಾಮಯ್ಯ ನವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ ಮಾರ್ಗದರ್ಶನ ಮಾಡಿ ಮುನ್ನಡೆಸುವವರು ಬೇಕು.

ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ದಾಂತ ಇರುವ ನಾಯಕರು ಬೇಕು. ಸತೀಶ್ ಜಾರಕಿಹೊಳಿ ಯವರಲ್ಲಿ ಅಂತಹ ಗುಣಗಳಿವೆ, ಜವಾಬ್ದಾರಿ ವಹಿಸಿಕೊಳ್ಳಲು ಅವರು ಸಮರ್ಥರಿದ್ದಾರೆ ಎಂದು ಬೆಳಗಾವಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮುಂದಿನ ಮುಖ್ಯಮಂತ್ರಿಯಾಗುವ ಡಿ.ಕೆ.ಶಿವಕುಮಾ‌ರ್ ಆಕಾಂಕ್ಷೆಗೆ ಈ ಹೇಳಿಕೆಯಿಂದ ಹಿನ್ನಡೆಯಾಗಿದೆ ಎಂದು ವರದಿ ಯಲ್ಲಿ ತಿಳಿಸಲಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page