“ಅಮೇರಿಕದಿಂದ ಬಂದ ಸಹೋಧರ ಗಣೇಶ ಪರ ದೊಡ್ಡಪ್ಪನ ಮಗ ಗಿರೀಶ ಕೇದಾರಿ ಹುಕ್ಕೇರಿ ಬಿರುಸಿನ ಪ್ರಚಾರ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕ್ಷೇತ್ರದ ಜನರೆ ನನ್ನ ಕುಟುಂಬವೆಂದು ಹಗಲು ರಾತ್ರಿ ಜನರ ಸೇವೆ ಮಾಡುವ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಗಣೇಶ ಹುಕ್ಕೇರಿ ದೊಡ್ಡಪ್ಪನ ಮಗ ಗಿರೀಶ ಕೇದಾರಿ ಹುಕ್ಕೇರಿ ಹೇಳಿದರು.
ತಾಲೂಕಿನ ಕೋಥಳಿವಾಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಪರ ಬಿರುಸಿನ ಪ್ರಚಾರ ನಡೆಸಿದ ಬಳಿಕ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಹುಕ್ಕೇರಿ ಕುಟುಂಬದಲ್ಲಿಯೇ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಸದಾ ಜನರ ಜೊತೆ ಇರುವ ಸರಳ ಸ್ವಭಾವ ವ್ಯಕ್ತಿಯಾಗಿದ್ದು,

ನಮ್ಮ ಚಿಕ್ಕಪ್ಪ ಪ್ರಕಾಶ ಮತ್ತು ಸಹೋಧರ ಗಣೇಶ ಇಬ್ಬರು ಕ್ಷೇತ್ರದ ಜನರ ಸೇವೆ ಮಾಡುವುದು ನಮಗೆ ತುಂಭಾ ಖುಷಿ ತರಿಸಿದೆ ಎಂದರು.
ನಾನು ಅಮೇರಿಕದಲ್ಲಿ ಇದ್ದರೂ ಸಹ ಚುನಾವಣೆಯಲ್ಲಿ ಗಣೇಶ ಪರ ಪ್ರಚಾರ ಮಾಡಲು ರಾಜ್ಯಕ್ಕೆ ಬಂದು ಗಣೇಶ ಪರವಾಗಿ ಇಡೀ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇನೆ. ಗಣೇಶ ಹುಕ್ಕೇರಿಗೆ ಇರುವ ಜನ ಬೆಂಬಲ ನೋಡಿದರೇ ಅವರು ಹೆಚ್ಚಿನ ಮತಗಳ ಅಂತರದಿಂದ ಖಂಡಿತವಾಗಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಮೂಡಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಮಾಡುವ ಸಂಕಲ್ಪ ಇಟ್ಟುಕೊಳ್ಳಲಾಗಿದೆ. ಕ್ಷೇತ್ರದ ಪ್ರತಿಯೊಂದು ಕೆರೆಗೆ ನೀರು ತುಂಭಿಸುವ ಯೋಜನೆ ಪೂರ್ಣಗೊಂಡಿವೆ. ಕೃಷ್ಣಾ ನದಿ ನೀರನ್ನು ಸಿಬಿಸಿ ಕಾಲುವೆಗೆ ಹರಿಸುವ ಶ್ರೀ ಅಣ್ಣಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಮೂಲಕ ಕೊನೆ ಹಳ್ಳಿಗೆ ನೀರು ಕೊಡುವ ಯೋಜನೆ ಸಾಕಾರಗೊಂಡಿದೆ. ಬೇಸಿಗೆಯಲ್ಲಿಯೂ ಸಹ ರೈತರ ಬಾವಿ ಕೊಳವೆ ಬಾವಿ ಬತ್ತಿ ಹೋಗಿಲ್ಲ, ಕಾಲುವೆಗೆ ನೀರು ಹರಿಸುವುದರಿಂದ ರೈತರಿಗೆ ಬಾರಿ ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಕಾಂತ ಪಾಟೀಲ, ಮಹಾವೀರ ಅಲಗೌಡ, ಜೀತೇಂದ್ರ ಪಾಟೀಲ, ಸುರೇಶ ಹಿತ್ತಪೂರೆ, ರಾಜೇಂದ್ರ ದಡ್ಡೆ, ಹುಮಾಯಿನ ಸನದಿ, ಬೋಲಾ ಗೌಂಡಿ, ರವಿ ಕುಂಬಾರ ಮುಂತಾದವರು ಇದ್ದರು.


Share with Your friends

You May Also Like

More From Author

+ There are no comments

Add yours