“ಎಸ್.ಸಿ,ಎಸ್.ಟಿ ವಿದ್ಯಾರ್ಥಿಗಳು ಸಹ ವಿದ್ಯಾವಂತರಾಗಿ ಉನ್ನತ ಹುದ್ದೆಗೆ ಸೇರಬೇಕೆಂಬುದು ನಮ್ಮ ಬಯಕೆಯಾಗಿದೆ. ಮುಂದೆಯೂ ಈ ಸಮುದಾಯದ ಏಳಿಗೆಗೆ ಪ್ರಾಧಾನ್ಯತೆ ಕೊಡಲಾಗುವುದು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ
ನಿಪ್ಪಾಣಿ :–

ಎಸ್.ಸಿ, ಎಸ್‌.ಟಿ ಸಮುದಾಯದ ಏಳಿಗೆಗೆ ಬಿಜೆಪಿಗೆ ಮತ ನೀಡಿ.

ನಿಪ್ಪಾಣಿ ಮತಕ್ಷೇತ್ರದ ಗಳತಗಾದಲ್ಲಿ, ಮಾನ್ಯ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಇಲಾಖೆಯ ಸಚಿವರಾದ ಶ್ರೀ ರಾಮದಾಸ್ ಅಠವಲೆ ಜಿ ಅವರ ನೇತೃತ್ವದಲ್ಲಿ, ನಡೆದ ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾದ ಸೌ.ಶಶಿಕಲಾ ಜೊಲ್ಲೆ ಹಾಗೂ
ಚಿಕ್ಕೋಡಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಎಸ್.ಸಿ, ಎಸ್.ಟಿ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರದ ಈಗಾಗಲೇ ಹಲವು ಯೋಜನೆಗಳನ್ನು ತಂದಿದೆ. ಗವಾನದಲ್ಲಿ ಸಂವಿಧಾನ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಿ ಅವರ ಸ್ಮಾರಕ ನಿರ್ಮಿಸಲು 10 ಎಕರೆ ಜಾಗದಲ್ಲಿ ಭೂಮಿ ಪೂಜೆ ಮಾಡಿದ್ದು, ಅಲ್ಲಿ ಸ್ಮಾರಕ ಜೊತೆಗೆ ವಿಜ್ಞಾನ ಕೇಂದ್ರ ಪ್ರಾರಂಭಿಸಲಾಗುವುದು. ಎಸ್.ಸಿ,ಎಸ್.ಟಿ ವಿದ್ಯಾರ್ಥಿಗಳು ಸಹ ವಿದ್ಯಾವಂತರಾಗಿ ಐಎಎಸ್,ಐಪಿಎಸ್ ನಂತಹ ಉನ್ನತ ಹುದ್ದೆಗೆ ಸೇರಬೇಕೆಂಬುದು ನಮ್ಮ ಬಯಕೆಯಾಗಿದೆ. ಮುಂದೆಯೂ ಈ ಸಮುದಾಯದ ಏಳಿಗೆಗೆ ಪ್ರಾಧಾನ್ಯತೆ ಕೊಡಲಾಗುವುದು. ಹೀಗಾಗಿ ತಾವೆಲ್ಲರೂ ಬಿಜೆಪಿಗೆ ಮತ ನೀಡಿ, ನನಗೆ ಆಶೀರ್ವದಿಸಿ ಎಂದು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಧನಂಜಯ ಮಹಾಡಿಕ ಜಿ, ಕ್ಷೇತ್ರದ ಚುನಾವಣಾ ಉಸ್ತುವಾರಿ ಡಾ. ಅಜೀತ ಗೋಪಚಾಡೆ, ಶ್ರೀ ದುಂಡಪ್ಪ ಬೆಂಡವಾಡೆ,ಶ್ರೀ ಚಂದ್ರಕಾಂತ ಕೋಟಿವಾಲೆ, ಸುಭಾಷ ಯರನಾಳೆ, ರೂಪಾಲಿ ವಾಯ್ದಂಡೆ, ಉತ್ತಮ ಕಾಂಬಳೆ, ಶಹಾಜಿ ಕಾಂಬಳೆ, ಕಾರ್ಯಕರ್ತರು, ಮತದಾರ ಬಾಂಧವರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours