“ಕೇರೂರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವೀರೇಂದ್ರ ಪಾಟೀಲ ಘಟಕ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರ ವತಿಯಿಂದ ಸತ್ಕಾರ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ತಾಲುಕಿನ ಕೇರೂರ ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ವೀರೇಂದ್ರ. ರಾಮಗೌಡಾ. ಪಾಟೀಲ ಕೇರೂರ ಘಟಕ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರ ವತಿಯಿಂದ ಸತ್ಕಾರ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಊರಿನ ಯುವಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಹಕಾರ ನೀಡಿದರೆ ನಮ್ಮ ಗ್ರಾಮ ಅಭಿವೃದ್ಧಿ ಮಾಡಲು ಸಾಧ್ಯ ಆಗಬಹುದು ಮತ್ತು ನನ್ನಿಂದ ಉರಿಗಾಗಿ ಪಂಚಾಯತಿ ಯಾವುದೇ ಕೆಲಸಗಳಿಗೆ ಸದಾ ಸಿದ್ಧ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಕರವೇ ಜಿಲ್ಲಾ ಮುಖಂಡರು ಶ್ರೀ ಸಂಜು ಬಡಿಗೇರ್ ಅಧ್ಯಕ್ಷರಿಗೆ ಸನ್ಮಾನ ಮಾಡಿ ಕರವೇ ವತಿಯಿಂದ ಗ್ರಾಮ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ಮಾತನಾಡಿದರು.
ಶ್ರೀ ಪ್ರತಾಪ ಪಾಟೀಲ.(ಕರವೇ ಯುವ ಘಟಕ ತಾಲೂಕಾ ಅಧ್ಯಕ್ಷರು)
ಶ್ರೀ ರಫೀಕ್ ಪಠಾಣ (ಕರವೇ ರೈತ ಘಟಕ )
ಶ್ರೀ ಸಿದ್ದು ಕಾಂಬಳೆ (ಕರವೇ ಯುವ ಘಟಕ)
ಶ್ರೀ ವಿಜಯ ಬ್ಯಾಳೆ (ಕರವೇ ಕೇರೂರ ಘಟಕ)
ಶ್ರೀ ಸಂತೋಷ ಪೂಜಾರಿ(ಕರವೇ ಮುಖಂಡರು)
ಶ್ರೀ ಅಮುಲ್ ನಾವಿ(ಕರವೇ ಮುಖಂಡರು)
ಶ್ರೀ ಸೂರಜ ತೋರಸೆ (ಕರವೇ ಮುಖಂಡರು)
ಶ್ರೀ ಖಾನಪ್ಪಾ ಬಾಡಕರ (ಕರವೇ ಮುಖಂಡರು) ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours