“ಕುಡಚಿ ಎಂ.ಪಿ.ಟ್ರೋಫಿ ಪಂದ್ಯಾವಳಿಗೆ ಚಾಲನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಲೋಕಸಭಾ ವ್ಯಾಪ್ತಿಯ ಹಾರೂಗೇರಿ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ ಪುರುಷ ಮತ್ತು ಮಹಿಳೆಯರ ಎಂ.ಪಿ.ಟ್ರೋಫಿ ಭವ್ಯ ಕಬ್ಬಡ್ಡಿ ಪಂದ್ಯಾವಳಿಗೆ ಪರಮಾನಂದವಾಡಿಯ

ಪ.ಪೂಜ್ಯ ಶ್ರೀ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿಗಳ ದಿವ್ಯಸಾನಿಧ್ಯದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಚಾಲನೆ ನೀಡಿ,ಸತ್ಕಾರ ಸ್ವೀಕರಿಸಿ, ಕ್ರೀಡಾಪಟುಗಳಿಗೆ ಶುಭ ಕೋರಿ, ಪಂದ್ಯಾವಳಿಯನ್ನು ವೀಕ್ಷಿಸಿದರು.

ಕಬ್ಬಡ್ಡಿ ನಮ್ಮ ಭಾರತೀಯ ದೇಶಿ ಕ್ರೀಡೆ.ಕಬ್ಬಡ್ಡಿಯನ್ನು ಆಡುವುದರಿಂದ ದೇಹವು ಸದೃಢವಾಗಿರುತ್ತದೆ. ಕಬ್ಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಹೆಮ್ಮೆಯ ಸಂಗತಿ.ಈ ನಿಟ್ಟಿನಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಕಲೆ,ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, 60 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿರುವುದು ಸಂತಸ ತಂದಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಪಿ. ರಾಜೀವ,ಶ್ರೀ ಮಲ್ಲಿಕಾರ್ಜುನ ಖಾನಗೌಡರ, ಶ್ರೀ ರಮೇಶ ಖೇತಗೌಡರ, ಶ್ರೀ ಬಸನಗೌಡ ಆಸಂಗಿ, ಶ್ರೀ ಬಸವರಾಜ ಖೋತ, ಶ್ರೀ ಬಸವರಾಜ ಯಲಶೆಟ್ಟಿ, ಶ್ರೀ ಹನುಮಂತ ಯಲಶೆಟ್ಟಿ, ಶ್ರೀ ಸಂತೋಷ್ ಸಿಂಗಾಡಿ, ಶ್ರೀ ಸಚಿನ ಪ್ರಧಾನಿ, ಶ್ರೀ ಮಾಂತೂ ಎರಡತ್ತಿ, ಶ್ರೀ ರಾಜು ನಾಯಕ, ಶ್ರೀ ದೀಪಕ ಪಾಟೀಲ, ಶ್ರೀ ಮಲಗೌಡ ಪಾಟೀಲ, ಶ್ರೀ ರಾಮಣ್ಣ ಗುರವ, ಶ್ರೀ ಮಲಗೌಡ ಉಮ್ರಾಣಿ, ಸ್ಥಳೀಯ ಮುಖಂಡರು,ಗಣ್ಯರು ಪಕ್ಷದ ಕಾರ್ಯಕರ್ತರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours