“ಗೋವಾ ರಾಜ್ಯದಲ್ಲಿ ಜೊಲ್ಲೆ ಗ್ರೂಪ್ ನ ಬೀರೇಶ್ವರ ಸಂಸ್ಥೆ ಪಾದಾರ್ಪಣೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

*ಗೋವಾ ರಾಜ್ಯದಲ್ಲಿ ಜೊಲ್ಲೆ ಗ್ರೂಪ್ ನ ಬೀರೇಶ್ವರ ಸಂಸ್ಥೆ ಪಾದಾರ್ಪಣೆ*

ಮಂಗಳವಾರ ಗೋವಾ ರಾಜ್ಯದ ಪೊಂಡಾ ನಗರದಲ್ಲಿ ಜೊಲ್ಲೆ ಗ್ರೂಪ್ ನ  ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ-ಸ್ಟೇಟ್) ಶಾಖೆ-ಪೊಂಡಾ195 ನೇ ನೂತನ ಶಾಖೆ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು  *ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಪ್ರಮೋದ ಸಾವಂತ  ಹಾಗೂ ಚಿಕ್ಕೋಡಿ ಲೋಕಸಭಾ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸ್ಥಳೀಯ ಮುಖಂಡರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.

ಗೋವಾ ಮುಖ್ಯಮಂತ್ರಿಗಳಾದ    ಶ್ರೀ ಪ್ರಮೋದ ಸಾವಂತ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಬೀರೇಶ್ವರ ಸಂಸ್ಥೆಯು ಕಾರ್ಯವನ್ನು ನೋಡುತ್ತಿದ್ದೇನೆ

ಕಳೆದ ವರ್ಷ ಶಾಖೆಗಳು ಪ್ರಾರಂಭವಾಗಬೇಕಿತ್ತು, ಆದರೆ ಕೆಲವು ಕಾರಣಾಂತರಗಳಿಂದ  ಇಂದು ಗೋವಾ ರಾಜ್ಯದ ಪೋಂಡಾ ಮತ್ತು ಟೀಸ್ಕ ಉಸಗಾಂವ ನಗರದಲ್ಲಿ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಪ್ರಾರಂಭವಾಗಿವೆ. ಬೀರೇಶ್ವರ ಸಂಸ್ಥೆಯು ಹಣ ವ್ಯವಹಾರದ   ಜೊತೆಗೆ,ಕೇಂದ್ರ  ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ಮುಟ್ಟಿಸುವ ಕಾರ್ಯ ನಿರಂತರವಾಗಿದೆ.ಬೀರೇಶ್ವರ ಸಂಸ್ಥೆಯು ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು ಇದರಿಂದ ಗೋವಾ ರಾಜ್ಯದ ಜನರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ. ಸಾರ್ವಜನಿಕರು ತಮ್ಮ ವ್ಯವಹಾರವನ್ನು ಮಾಡುವ ಮೂಲಕ ಶಾಖೆಯ ಪ್ರಗತಿ ಪಥದಲ್ಲಿ ಮುನ್ನಡೆಸಬೇಕು ಎಂದು ಮಾತನಾಡಿದರು.

ಬಳಿಕ ಜೊಲ್ಲೆ ಗ್ರೂಪ್ ನ ಸಂಸ್ಥಾಪಕ ಹಾಗೂ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಸಂಸ್ಥೆಯ ನಡೆದು ಬಂದ ದಾರಿ ಸಂಸ್ಥೆಯ ಸೇವೆಗಳ ಬಗ್ಗೆ ಪ್ರಸ್ತಾವಿಕವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೋವಾ ಘಟಕದ ಅಧ್ಯಕ್ಷರಾದ ಶ್ರೀ ಸಿದ್ದಣ್ಣ ಮೇಟಿ,ಖ್ಯಾತ ಉಧ್ಯಮಿಗಳಾದ ಶ್ರೀ ಶಾಂತಾರಾಮ ಕೊಳವೆನಕರ,ನಗರಸಭೆ ಸದಸ್ಯರಾದ ಸೌ.ದೀಪಾ ಕೊಳವೆನಕರ,ಶ್ರೀ ವೀರೇಂದ್ರ ಡವಳಿ,ಸೌ.ಅಪೂರ್ವಾ ದಳವಿ,ಚಂದ್ರಕಾಂತ ಪಾಟೀಲ,ಬೀರೇಶ್ವರ ಸಂಸ್ಥೆಯ ಮುಖ್ಯ ಕಚೇರಿಯ ಅಧ್ಯಕ್ಷರಾದ ಶ್ರೀ ಜಯಾನಂದ ಜಾಧವ, ಉಪಾಧ್ಯಕ್ಷರಾದ ಶ್ರೀ ಸಿದ್ರಾಮ ಗಡದೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರಾದ ಪವನ ಪಾಟೀಲ, ನಿರ್ದೇಶಕರಾದ ಶ್ರೀ ಶರದ ಜಂಗಟೆ,ಜೊಲ್ಲೆ ಗ್ರೂಪ್ ನ ಎಲ್ಲಅಂಗ ಸಂಸ್ಥೆಗಳ ನಿರ್ದೇಶಕರು, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಂದ್ರ ಚೌಗಲಾ, ಉಪಪ್ರಧಾನ ವ್ಯವಸ್ಥಾಪಕರಾದ ಬಹದ್ದೂರ ಗುರವ,ಹಾಗು ಸಿಬ್ಬಂದಿಗಳು  ಸದಸ್ಯರು, ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours