“ಶಾಸಕ ಗಣೇಶ ಹುಕ್ಕೇರಿ ಅವರು ಯಕ್ಸಂಬಾ ಪಟ್ಟಣದಿಂದ ಬೃಹತ್ ಹನುಮ ಪಾದಯಾತ್ರೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಹನುಮನ ದೇವಸ್ಥಾನಕ್ಕೆ ಪಾದಯಾತ್ರೆ

ಸುಕ್ಷೇತ್ರ ತೋರನಹಳ್ಳಿ ಗ್ರಾಮಕ್ಕೆ ಜ.22 ರಂದು ಶ್ರೀರಾಮ ಭಕ್ತ ಹನುಮನ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ಮಾಡಲು ಶಾಸಕ ಗಣೇಶ ಹುಕ್ಕೇರಿ ಅವರು ತಾಲುಕಿನ ಯಕ್ಸಂಬಾ ಪಟ್ಟಣದಿಂದ ಬೃಹತ್ ಹನುಮ ಪಾದಯಾತ್ರೆ ಮೂಲಕ ತೋರನಹಳ್ಳಿ ಮಾರುತಿ ದೇವಸ್ಥಾನಕ್ಕೆ ತೆರಳಲಿದ್ದಾರೆ ಎಂದು ತೋರಣಹಳ್ಳಿ ಮಾರುತಿ ದೇವಸ್ಥಾನ ಕಮೀಟಿ ಸದಸ್ಯರು ತಿಳಿಸಿದ್ದಾರೆ.

ಸುಮಾರು 5000 ಹನುಮ ಭಕ್ತರೊಂದಿಗೆ ಶಾಸಕ ಗಣೇಶ ಹುಕ್ಕೇರಿ ಅವರು ಬೆಳಿಗ್ಗೆ 6 ಗಂಟೆಗೆ ಯಕ್ಸಂಬಾ ಪಟ್ಟಣದ ಹನುಮಾನ ದೇವಸ್ಥಾನದಿಂದ

ಚಿಕ್ಕೋಡಿ ಮಾರ್ಗವಾಗಿ ಸುಕ್ಷೇತ್ರ ತೋರಣಹಳ್ಳಿ ದೇವಸ್ಥಾನದವರೆಗೆ ಮಾರುತಿ మి 25 ಪಾದಯಾತ್ರೆ ಕೈಗೊಂಡು 25 ಲಕ್ಷ ರೂ. ಗಳ ವೆಚ್ಚದ ಮಾರುತಿ ಮಂದಿರ ಜೀರ್ಣೋದ್ಧಾರದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದು, ಈ ವೇಳೆ ತೋರಣಹಳ್ಳಿ ಮಾರುತಿ ದೇವಸ್ಥಾನದಲ್ಲಿ ಅಂದಾಜು 25000 ಜನರು ಸೇರುವ ನಿರೀಕ್ಷೆಯಿದೆ. ಈ ಎಲ್ಲಾ ಭಕ್ತರಿಗೂ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ ಹಾಗೂ ಸಮಸ್ತ ಹನುಮ ಭಕ್ತರು ಈ ಪಾದಯಾತ್ರೆಯಲ್ಲಿ భాగ్యగి ಹನುಮನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಕಮೀಟಿ ಸದಸ್ಯರು ಕೋರಿದ್ದಾರೆ.


Share with Your friends

You May Also Like

More From Author

+ There are no comments

Add yours