ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲುಕಿನ ಅಂಕಲಿ ಗ್ರಾಮದಲ್ಲಿ ಧರನಾಯಿಕ ಇಂಡಿಯನ ಗ್ರಾಮೀಣ ವಿತರಣ ಕೇಂದ್ರದ ನೂತನ ಕಛೇರಿ ಉದ್ಟಾಟಿಸಿದ ಕೆ ಎಲ್ ಈ ಕಾರ್ಯಾಧ್ಯಕ್ಷ ಡಾಕ ಪ್ರಭಾಕರ್ ಕೋರೆ
ಮಾತನಾಡಿ ಹೊಗೆ ಮುಕ್ತ ಗ್ರಾಮಗಳ ಸಂಕಲ್ಪ ಹಾಗೂ ಮಹಿಳೆಯರ ಆರೋಗ್ಯದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೊಳಿಸಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಕೆ ಎಲ ಈ ಸಂಸ್ಥೆ ಕಾರ್ಯಧ್ಯಕ್ಷ ಪ್ರಭಾಕರ್ ಕೋರೆ ಹೇಳಿದರು
ಅವರು ತಾಲೂಕಿನ ಅಂಕಲಿ ಗ್ರಾಮದಲ್ಲಿ ಗುರುವಾರ ಧರನಾಯಿಕ ಇಂಡಿಯನ್ ಗ್ಯಾಸ್ ಗ್ರಾಮೀಣ ವಿತರಣಾ ಕೇಂದ್ರದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು
ಗ್ರಾಮಸ್ಥರು ಗ್ಯಾಸ್ ಸಿಲಿಂಡರಗಾಗಿ ಬೇರೆ ಕಡೆಗೆ ಹೋಗಬೇಕಾಗಿತ್ತು ಗ್ರಾಮದಲ್ಲಿ ಏಜಸ್ಸಿ ಆಗಿರುವದರಿಂದ ಅಂಕಲಿ. ಸೌಂದತ್ತಿ ನಸಲಾಪೂರ.ಕಾಡಾಪೂರ ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದರು
ಈ ಸಂದಭ೯ದಲ್ಲಿ ವೇದಿಕೆ ಮೇಲೆ ಗ್ರಾಮ ಪಂಚಾಯತ ಸದಸ್ಯರಾದ,ಸುರೇಶ ಪಾಟೀಲ,ತುಕಾರಾಮ ಪಾಟೀಲ, ವಿವೇಕ ಕಮತೆ,ವಿಕಾಸ ಪಾಟೀಲ,ಅಣ್ಣಪ್ಪಾ ಹರಕೆ,ಶ್ರೀಮತಿ ಶೃಲಜಾ ಪಾಟೀಲ,ಶ್ರೀಮತಿ ಲತಾ ಬೋಬನಾಳೆ,ಶ್ರೀಮತಿ ರಿಯಾನ ಶಿಲಾಪೊರ, ಶ್ರೀಮತಿ ಸಂತೋಷಿ ಬೋಬನಾಳೆ,ಪಾರ್ವತಿ ಧರನಾಯಿಕ,ಸುರೇಶ ವಡ್ಡರ, ನಾಗಪ್ಪಾ ಧರನಾಯಿಕ ಸೇರಿದಂತೆ ಧರನಾಯಿಕ ಬಂಧುಗಳು ಉಪಸ್ಥಿತರಿದ್ದರು
ಕಾರ್ಯಕ್ರಮವನು ರಾಘವೇಂದ್ರ ಲಂಬುಗೋಳ ನಿರೂಪಿಸಿ ವಂದಿಸಿದರು”
+ There are no comments
Add yours