“ಜೊಲ್ಲೆ ಎಜುಕೇಶನ್ ಸೊಸೈಟಿ ಅಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿ ಮಾರುತಿ ಸುನೀಲ ಮದಾಳೆ ಅವರಿಗೆ ಚಿನ್ನದ ಪದಕ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಆಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ವಿಶೇಷ ಒಲಂಪಿಕ್ಸ್ ಭಾರತ ಕರ್ನಾಟಕ ಇದರ ರಾಷ್ಟ್ರೀಯ ಮಟ್ಟದ ಕ್ರೀಡಾ ಚಾಂಪಿಯನ್ ಸ್ಪರ್ಧೆಯಲ್ಲಿ ಮಟ್ಟದ ಬ್ಯಾಟಮೆಂಟನ್ ಸ್ಪರ್ಧೆಯಲ್ಲಿ ನಮ್ಮ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿ ಮಾರುತಿ ಸುನೀಲ ಮಧಾಳೆ  ಅವರು ಭಾಗವಹಿಸಿ ಬೆಳ್ಳಿ ಪದಕ ಗಿಟ್ಟಿಸಿಕೊಂಡು ಜೊಲ್ಲೆ ಗ್ರೂಪ್  ಸಂಸ್ಥೆಗೆ ಕೀರ್ತಿಯನ್ನು ಹೆಚ್ಚಿಸಿದಕ್ಕೆ ಅವರನ್ನು ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಯವರು ಸತ್ಕರಿಸಿ,ಅಭಿನಂದಿಸಿ ಶುಭ ಹಾರೈಸಿದರು.

ಮಾರುತಿ ಮಧಾಲೆ ಅವರ ಸಾಧನೆಗೆ ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿಶೇಷ ಒಲಂಪಿಕ್ಸ್ ಭಾರತ ಕರ್ನಾಟಕ ಇದರ ರಾಜ್ಯ ಅಧ್ಯಕ್ಷರಾದ ಶಶಿಕಲಾ ಜೊಲ್ಲೆ ಅವರು ಅಭಿನಂದಿಸಿದ್ದಾರೆ.

ಪ್ರಶಸ್ತಿ ಪತ್ರವನ್ನು ಜೊಲ್ಲೆ ಗ್ರೂಪ್ ಈವೆಂಟ್ ಮ್ಯಾನೇಜರ್ ವಿಜಯ ರಾವುತ್ ಶಿಕ್ಷಕರಾದ ಶ್ರೀ ರಾಜು ಹಿರೇಮಠ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours