“ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಇವೆರಡನ್ನೂ ಪ್ರತ್ಯೇಕ ಜಿಲ್ಲೆಗಳಾಗಿ, ಮಾಡಲು ನಾನು ಸಿದ್ಧ”- ಸಚಿವ ಸತೀಶ್ ಜಾರಕಿಹೊಳಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಶುಕ್ರವಾರ ದಿನಾಂಕ 7/ 6/ 2024 ರಂದು ಬೆಳಗಾವಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ನಡೆಸಿದ ಉಸ್ತುವಾರಿ ಸಚಿವರು ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಇವೆರಡನ್ನೂ ಪ್ರತ್ಯೇಕ ಜಿಲ್ಲೆಗಳಾಗಿ, ಮಾಡಲು ನಾನು ಸಿದ್ಧ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ

ಪತ್ರಿಕೆ ಹಾಗೂ ಟಿವಿ ಮಾಧ್ಯಮ ಗಳಿಗೆ ಹೇಳಿಕೆ ನೀಡಿರುವುದನ್ನು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯು ಸ್ವಾಗತಿಸುತ್ತದೆ, ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ವಿಭಜಿಸುವಲ್ಲಿ ಆಸಕ್ತಿ ತೋರಿರುವ ಸಚಿವರಿಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ ಇವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ, ಹಾಗೂ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ,

25 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕರೆ ಚಿಕ್ಕೋಡಿ ಭಾಗದ ಜನರಿಗೆ ಉದ್ಯೋಗ ಅವಕಾಶ, ಅಭಿವೃದ್ಧಿ, ರೈತರಿಗಾಗಿ ಮಾರುಕಟ್ಟೆ, ಶಿಕ್ಷಣ ಆರೋಗ್ಯ ಮತ್ತು ನೀರಾವರಿ ಕ್ಷೇತ್ರಗಳು ಬೆಳೆಯಲಿವೆ ಎಂದು ಹೇಳಿದರು. ಕೂಡಲೇ ಸರಕಾರ ಜಿಲ್ಲಾ ಮಾಡಲೆಂದು ಸರಕಾರಕ್ಕೆ ಒತ್ತಾಯ ಮಾಡಲಾಗಿದೆ

ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳಾಗಲಿ ಎಂದು ಹೋರಾಟ ಸಂಘಟನೆಗಳ ಹಾಗೂ ನಾಗರಿಕರ ಆಸೆಯಾಗಿದೆ. ಕರ್ನಾಟಕ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಲಾಗಿದೆ. ಇದೆ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಉಪಸ್ಥಿತರಿದ್ದರು. ಸಂಜಯ ಪಾಟೀಲ ಗೌರಧ್ಯಕ್ಷರು ರಫೀಕ್ ಪಠಾಣ ಸತೀಶ್ ಚಿಂಗಳೇ ಬಸವರಾಜ ಸಾಜನೆ ಅಮೋಲ್ ನಾವಿ ಮಾಳು ಖರೇನವರ ಕುಮಾರ ಪಾಟೀಲ ಸೇರಿದಂತೆ ಎಲ್ಲರೂ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours