“ಚುನಾವಣಾ ಪ್ರಚಾರ ಸಭೆಗೆ ನಿಪ್ಪಾಣಿಗೆ ಪ್ರಕಾಶ ಅವಾಡೆ, ರಾಹುಲ ಅವಾಡೆ ಅವರು ನಿರಂತರವಾಗಿ ಪ್ರತಿ ಗ್ರಾಮಗಳಲ್ಲಿ ಸಭೆ ನಡೆಸಿ,ನನ್ನ ಗೆಲುವಿಗೆ ಕಾರಣರಾದರು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಇಂಚಲಕರಂಜಿ :–

ನಗರದ ನಮ್ಮ ಆತ್ಮೀಯರು ಹಾಗೂ ಮಾಜಿ ಸಂಸದರಾದ ಶ್ರೀ ಕಲ್ಲಪ್ಪಣ್ಣ ಅವಾಡೆ ಜಿ ಶಾಸಕರಾದ ಶ್ರೀ ಪ್ರಕಾಶ ಅವಾಡೆ ಮತ್ತು ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ರಾಹುಲ ಅವಾಡೆ ಅವರ ನಿವಾಸಕ್ಕೆ ಸೌಹಾರ್ದಯುತವಾಗಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಭೇಟಿ ನೀಡಿದರು.

ಚುನಾವಣಾ ಪ್ರಚಾರ ಸಭೆಗೆ ನಿಪ್ಪಾಣಿಗೆ ಪ್ರಕಾಶ ಅವಾಡೆ ಆಗಮಿಸಿ ಮತ್ತು ರಾಹುಲ ಅವಾಡೆ ಅವರು ನಿರಂತರವಾಗಿ ಪ್ರತಿ ಗ್ರಾಮಗಳಲ್ಲಿ ಸಭೆ ನಡೆಸಿ,ನನ್ನ ಗೆಲುವಿಗೆ ಕೈಜೋಡಿಸಿದ ಅವರಿಗೆ ಮನಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಇದೇ ವೇಳೆ ಅವರ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿ, ಅವರ ಪ್ರೀತಿಪೂರ್ವಕ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.


Share with Your friends

You May Also Like

More From Author

+ There are no comments

Add yours