“ಬರಗಾಲ ಸಂಕಷ್ಟ ರೈತರು ಎದುರಿಸುತ್ತಿದ್ದಾರೆ ಅದರಲ್ಲಿ ಇದ್ದುದರಲ್ಲಿ ನೀರನ್ನು ಹರಿಸಿ ಬೆಳೆ ಉಳಿಸಿಕೊಳ್ಳೋಣ ಅಂದ್ರೆ ವಿದ್ಯುತ್ ಸರಬರಾಜು ಇಲ್ಲಾ ದನಕರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ತಾಲುಕಿನ ಕೆರೊರ ಗ್ರಾಮದಲ್ಲಿ ರೈತ ಸಂಘಟನೆ ವತಿಯಿಂದ ಹಮ್ಮಿಕೊಂಡ ಸಭೆಯಲ್ಲಿ ವಿದ್ಯುತ್ ಸರಬರಾಜು ಸರಿಯಾಗಿ ನೀಡುತ್ತಿಲ್ಲ.ದಿನಕ್ಕೆ 2 ಅಥವಾ 1 ಗಂಟೆ ಕರೆಂಟ್ ನೀಡುತ್ತಿದ್ದಾರೆ. ಈ ಬಾರಿ ಬರಗಾಲ ಸಂಕಷ್ಟ ರೈತರು ಎದುರಿಸುತ್ತಿದ್ದಾರೆ ಅದರಲ್ಲಿ ಇದ್ದುದರಲ್ಲಿ ನೀರನ್ನು ಹರಿಸಿ ಬೆಳೆ ಉಳಿಸಿಕೊಳ್ಳೋಣ ಅಂದ್ರೆ ಕರೆಂಟ್ ಇಲ್ಲಾ

ದನಕರುಗಳಿಗೆ ನೀರು ಸಿಗುತ್ತಿಲ್ಲ ಎಂದು ಚಿಕ್ಕೋಡಿ ತಾಲೂಕಾ ಹಸಿರು ಸೇನೆ ಅಧ್ಯಕ್ಷರಾದ ಮಂಜುನಾಥ ಪರಗೌಡರು ಮಾತನಾಡಿ 2 ದಿನಗಳಲ್ಲಿ ಸರಿಯಾಗಿ ಕರೆಂಟ್ ಪೂರೈಸಬೇಕು.

ಇಲ್ಲವಾದರೆ ಗುರುವಾರ ದಿನ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ಚಿಕ್ಕೋಡಿ ಹೆಸ್ಕಾಂ ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಗಡವು ನೀಡಿದ್ದಾರೆ.ಈ ಸಭೆಯಲ್ಲಿ ಚಿಕ್ಕೋಡಿ ತಾಲುಕಿನ ಹೆಸ್ಕಾಂ, ಎಸ್ ಬಂಡಗಾರ ಎ ಇ ಇ, ಅಂಕಲಿ ಶಾಖಾದಧಿಕಾರಿ, ಪಾಟೀಲ ಹಾಗೂ ಸಿನೀಯರ್ ಅಸಿಸ್ಟೆಂಟ್, ಕುಮಾರ ಕುಲಕರ್ಣಿ, ಮಾತನಾಡಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಬಾಳಗೌಡ ಪಾಟೀಲ.ಮಲ್ಲು ಕಾನಡೆ,ಜ್ಯೋತಿಬಾ ಮಗದುಮ,ಬಾಪು ಕುತ್ತೆ,ಅಜಿತ ಮೂರನಾಳೆ ಹಾಗೂ ಅಪ್ಪಾಸಾಬ ಕೋಳಿ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours