“ಮಕ್ಕಳ ಆರಂಭಿಕ ಕಲಿಕೆಯು ಉತ್ತಮವಾಗಿದ್ದರೆ ಮುಂದಿನ ಕಲಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುವುದು ಅಂಗನವಾಡಿ ಕೇಂದ್ರವೇ ಕಲಿಕೆಯ ಮೊದಲ ಮೆಟ್ಟಿಲಾಗಿದೆ- ಶಶಿಕಲಾ ಜೊಲ್ಲೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ನಿಪ್ಪಾಣಿ :–

ಚಿಣ್ಣರ ಕಲಿಕೆಗಾಗಿ ಅಂಗನವಾಡಿ ಕೇಂದ್ರ ಲೋಕಾರ್ಪಣೆ.

ನಿಪ್ಪಾಣಿ ಮತಕ್ಷೇತ್ರದ ಹದನಾಳ ಗ್ರಾಮದಲ್ಲಿ,16 ಲಕ್ಷ ರೂ. ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಆರಂಭಿಕ ಕಲಿಕೆಯು ಉತ್ತಮವಾಗಿದ್ದರೆ ಅವರ ಮುಂದಿನ ಕಲಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುವುದು. ಹಾಗಾಗಿ ಅಂಗನವಾಡಿ ಕೇಂದ್ರವೇ ಕಲಿಕೆಯ ಮೊದಲ ಮೆಟ್ಟಿಲಾಗಿದೆ. ಪುಟಾಣಿಗಳ ಉತ್ತಮ ಬೆಳವಣಿಗಾಗಿ ಸುವ್ಯವಸ್ಥಿತ ಅಂಗನವಾಡಿ ಕಟ್ಟಡ ನಿರ್ಮಿಸಿ ಮುದ್ದು ಕಂದಮ್ಮಗಳಿಗೆ ಕಲಿಕೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿ.ಡಿ.ಪಿ.ಓ ಶ್ರೀ ರಾಮಮೂರ್ತಿ, ಶ್ರೀ ಆನಂದ ಯಾಧವ,ಶ್ರೀ ರಂಗರಾವ ಶೇಟಕೆ, ಶ್ರೀ ತುಕಾರಾಮ ಶೇಟಕೆ, ಶ್ರೀ ಧನಾಜಿ ಪಡೇಕರ, ಶ್ರೀ ತುಕಾರಾಮ ರಾಜುಗಡೆ, ಶ್ರೀ ಪ್ರಕಾಶ ಶಿಂಧೆ, ಶ್ರೀ ಕಿರಣ ನಿಕಾಡೆ, ಸ್ಥಳೀಯ ಮುಖಂಡರು, ಗಣ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours