ಉತ್ತರ ಪ್ರದೇಶದ ಬಹ್ಮಚ್ನಲ್ಲಿ ಓರ್ವ ವಧು ಮಂಟಪದಲ್ಲಿ ಹೊಟ್ಟೆ ಹಿಡಿದು ಅಳಲು ಪ್ರಾರಂಭಿಸಿದ್ದು, ಮತ್ತು ಶೌಚಾಲಯಕ್ಕೆ ಹೋಗುವ ನೆಪದಲ್ಲಿ ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ಭಾನುವಾರ ನಡೆದಿದೆ.
ಮಧ್ಯಾಹ್ನದವರೆಗೆ ವಧುವಿಗಾಗಿ ಕಾದ ವರ ನಂತರ ಮದುವೆಯ ಮೆರವಣಿಗೆಯೊಂದಿಗೆ ಹಿಂತಿರುಗಿದ್ದಾನೆ.
ವರದಿಗಳ ಪ್ರಕಾರ, ಅವಳು ಒಂದು ವಾರದ ಹಿಂದೆಯೂ ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಳು ಆದರೆ ಕುಟುಂಬ ಸದಸ್ಯರು ಅವಳನ್ನು ಪತ್ತೆಹಚ್ಚಿ ವಾಪಸ್ ಕರೆದುಕೊಂಡು ಬಂದಿದ್ದರು.