ಚಿಕ್ಕೋಡಿ :–
ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಯುವದರಿಂದ ಶಿಕ್ಷಣಕ್ಕೆ ಭದ್ರಬುನಾದಿ ಹಾಕಿದಂತೆ ಅನ್ಯಭಾಷೆಗಳ ವ್ಯಾಮೋಹದಿಂದ ನೆಲದ ಭಾಷೆ ಮರಿಯಬಾರದು ಇಂದಿನ ಮಕ್ಕಳಿಗೆ ಶಿಕ್ಷಣಕ್ಕೆ ವಿನಯ ಸಂಸ್ಕಾರ ನೀಡಿ ಬೆಳೆಸಬೆಕೆಂದು ಶ್ರೋ.ಬ್ರ.ನಿ ಮಜಲಟ್ಟಿಯ ಸದ್ಗುರು ಬಸವಪ್ರಭು ಮಹರಾಜರು ಪಾಲಕರಿಗೆ ಕರೆನೀಡಿದರು ಅವರು ಕಳೆದ ರವಿವಾರ 08 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಧುಳಗನವಾಡಿ 2000-01ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹಿತರ ಪುನರ ಮಿಲನ ಸಮಾರಂಭ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಗುರು ಶಿಷ್ಯರ ಸಂಬಂಧ ಮರೆಯದ ಭಾಂಧ್ಯವ ಗುರುಕೊಟ್ಟ ವಿದ್ಯೆ ಜೀವನಕ್ಕೆ ಸಧಾ ಜ್ಞಾನಜೋತಿ ಬೆಳಗುತದೆಂರು.

ಈ ಹಿಂದೆ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಆಗಿರುವ ಎಸ್.ಬಿ ನೆರ್ಲೆ ಶಿಕ್ಷಕರು ಮಾತನಾಡಿ ಧುಳಗನವಾಡಿ ಜನರ ಸಹಕಾರದಿಂದ ಈ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸುವ ಬಾಗ್ಯ ನನಗೆ ಸಿಕಿತ್ತು ಸರಕಾರಿ ಶಾಲೆ ಯಾವುದಕ್ಕೆ ಕಡಿಮೆ ಇಲ್ಲದಾಗೆ ಸರಕಾರ ಸಕಲ ಸೌಲಭ್ಯ ಕೊಟ್ಟಿದೆ ಮಕ್ಕಳ ಶಿಕ್ಷಣಕ್ಕೆ ಪಾಲಕರು ಶಿಕ್ಷಕರು ಜವ್ದಾದರಿಯಿಂದ ಕಾರ್ಯ ಮಾಡುವದು ಅತ್ಯಗತ್ಯವಿದೆ ಎಂದರು. ಶಿಕ್ಷಕರಾದ ಪಿ.ಎಂ ಮಲ್ಲಪುರೆ, ಪಿ.ಎಮ್. ಮುತ್ತಿನ, ಬಿ.ಕೆ ಪಾಟೀಲ ಸಮಾರಂಭದಲ್ಲಿ ಮಾತನಾಡಿದರು, ಅಧ್ಯಕ್ಷತೆಯನ್ನು ಹಿರಿಯ ನಿವೃತ್ತ ಮುಖ್ಯೋಪಾಧ್ಯರಾದ ಬಾಳಗೌಡ ಪಾಟೀಲ ವಹಿಸಿದರು. ನಿವೃತ್ತ ಮುಖ್ಯೋಪಧ್ಯಯರಾದ ಬಿ.ಕೆ. ಪಾಟೀಲ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ವಿ.ಕೆ ಧುಮಾಳ, ಎಲ್ ಬಿ ಕರ್ಲೆಪನವರ ಹಾಗೂ ಎಸ್.ಡಿ ಎಮ್ ಸಿ ಅಧ್ಯಕ್ಷ ಅಣ್ಣಪ್ಪಾ ಜೋಡಟ್ಟಿ. ಕಪಿಲ ಚಿಮಣೆ, ಅಮರ ಕಮತೆ, ಉಮೇಶ ಖೋತ, ಶಿಲ್ಪಾ ಖೋತ, ಪೂರ್ಣಿಮಾ ಹವಾಲ್ದಾರ, ಪ್ರೀತಿ ಮಗದುಮ್ಮ, ಕಿರಣ ಮೋಳಗೆ, ಆ ಸಾಲಿನ ಎಲ್ಲ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಾರ್ಯಕ್ರಮದ ನೆನಪಿಗಾಗಿ ಶಾಲೆ ಆವರಣದಲ್ಲಿ ಸಸಿ ನೆಡಲಾಯಿತು. ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಹಾಲಿ ನಿವೃತ್ತ ಶಿಕ್ಷಕರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಗೆ ಟಿ.ವ್ಹಿ ದೇಣಿಗೆ ನೀಡಿದ ಆನಂದ ಕಮತೆ, ವೀರು ಕಮತೆ ಹಾಗೂ ಏಳನೇ ಮತ್ತು ಹತ್ತನೇ ತರಗತಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿಲಾಯಿತು. ಪ್ರಸ್ತಾವಿಕವಾಗಿ ಮಾಲಾಶ್ರೀ ಖೋತ ಮಾತನಾಡಿದರ. ಸುಜಾತಾ ಮಗದುಮ್ಮ ಕಾರ್ಯಕ್ರಮದ ನಿರೂಪಿಸಿದರು. ವೀರಕುಮಾರ ಚಿಮಣೆ ಸ್ವಾಗತಿಸಿದರು, ಭಾರತಿ ಪಾಟೀಲ ವಂದಿಸಿದರು.