ಮೈಸೂರು :–
ಮನೆಯಲ್ಲಿ ಯಾರೂ ಇಲ್ಲ, ಬಾ ಎಂದು ಯುವತಿಯರ ಮೂಲಕ ಶ್ರೀಮಂತರನ್ನು ಕೋಣೆಗೆ ಕರೆಸಿ, ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ತಂಡವನ್ನು ಮೈಸೂರಿನ ಪಿರಿಯಾಪಟ್ಟಣದಲ್ಲಿ ಬಂಧಿಸಲಾಗಿದೆ. ಬಂಧಿತರಲ್ಲಿ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.
ವಾಟ್ಸಾಪ್ ಮೂಲಕ ಕಲರ್ ಕಲರ್ ಸಂದೇಶ ಮಾಡಿ ಸಂಪರ್ಕಿಸಿದ ಯುವತಿ, ರೂಂಗೆ ಕರೆಸಿ ಬಾಗಿಲು ಹಾಕಿದ್ದಳು.

ನಂತರ ತಂಡವೊಂದು ಏಕಾಏಕಿ ಕೋಣೆಗೆ ನುಗ್ಗಿ ನನ್ನನ್ನು ಥಳಿಸಿ ₹10 ಲಕ್ಷ ನೀಡುವಂತೆ ಬೆದರಿಕೆ ಹಾಕಿತ್ತು ಎಂದು ಬಟ್ಟೆ ವ್ಯಾಪಾರಿಯೊಬ್ಬರು ದೂರು ನೀಡಿದ್ದರು.