” ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕಕ್ಕೆ ಚಾಲನೆ”

ಚಿಕ್ಕೋಡಿ :–

ತಾಲೂಕಾ ಕರವೇ ಕಾರ್ಮಿಕ ಘಟಕಕ್ಕೆ ಕರವೇ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಇವರು ಚಾಲನೆ ನೀಡಿದರು, ಕರವೇ ಕಾರ್ಮಿಕ ಘಟಕದ ಚಿಕ್ಕೋಡಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಸೋಮೇಶ ಹಿರೇಮಠ ಇವರನ್ನು ಆಯ್ಕೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಪ್ರತಾಪ ಕಾಂಬಳೆ ಇವರು ಕಾರ್ಮಿಕ ಯೋಜನೆಗಳ ಕುರಿತು ಹಲವಾರು ಮಾಹಿತಿಗಳನ್ನು ನೀಡಿದರು.ಸಂಜು ಬಡಿಗೇರ ಮಾತನಾಡಿ ನಮ್ಮ ತಾಲೂಕಿನಲ್ಲಿ ಕಾರ್ಮಿಕರಿಗೆ ಯಾವುದೇ ತರದ ಅನ್ಯಾಯ ಆಗಬಾರದು, ಕಾರ್ಮಿಕರಿಗೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ಸಿಗಬೇಕು, ಕಾರ್ಮಿಕರ ನ್ಯಾಯಕ್ಕಾಗಿ ನಾವು ಹೋರಾಟ ಮಾಡಲು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಪೌರ ಕಾರ್ಮಿಕರನ್ನು ಸರಕಾರ ಕೂಡಲೇ ಖಾಯಂ ಗೊಳಿಸಬೇಕು, ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಕನಿಷ್ಟ ವೇತನವೂ ಸಿಗದೇ ಮದ್ಯವರ್ತಿಗಳ ಪಾಲಾಗುತ್ತಿದೆ, ನಾವು ಯಾವಾಗಲೂ ಕಾರ್ಮಿಕರ ಪರವಾಗಿ ಹೋರಾಟ ಮಾಡಲು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಆನಂದ ಕಟ್ಟಿ, ಕಿರಣ ಬಣ್ಣನ್ನವರ, ಮಹಾಂತೇಶ ಲಿಂಬಿಗಿಡದ, ಅಮೂಲ ನಾವಿ, ರಫೀಕ್ ಪಠಾಣ, ರುದ್ರಯ್ಯಾ ಹಿರೇಮಠ, ಶಿವು ಮದಾಳೆ, ಸಚೀನ ದೊಡ್ಡಮನಿ, ಮಾಳು ಕರೆಣ್ಣವರ, ಅನೀಲ ನಾವಿ, ಶಿವಾಜಿ ಖಾಡೆ, ಸಂತೋಷ ಕುರಣೆ, ರಾಜು ಜಮಗೌಡರ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು..

Share this post:

Leave a Reply

Your email address will not be published. Required fields are marked *