“ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಚಿಕ್ಕೋಡಿಯಲ್ಲಿ ಉಚಿತ “ಮಕ್ಕಳ ಬೆನ್ನುಹುರಿ ತಪಾಸಣೆ” ಶಿಬಿರವನ್ನು ನೆರವೇರಿಸಲಾಯಿತು”

ಚಿಕ್ಕೋಡಿ :–
ಮಂಗಳವಾರ ಜೂನ್ ೨೪ ರಂದು ಜಿಲ್ಲಾ ಪಂಚಾಯತ ಬೆಳಗಾವಿ,ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಬೆಳಗಾವಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಚಿಕ್ಕೋಡಿ, ಭಗವಾನ ಮಹಾವೀರ ಜೈನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಪಟ್ಟಣದಲ್ಲಿ ರುವ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ

ಉಚಿತ “ಮಕ್ಕಳ ಬೆನ್ನುಹುರಿ ತಪಾಸಣೆ” ಶಿಬಿರವನ್ನು ಅಪರ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಚಿಕ್ಕೋಡಿ ಉದ್ಘಾಟಿಸಿ ಇಲ್ಲಿಯವರಗೆ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದಲ್ಲಿ ಸಮಾರು ೪೫ ಮಕ್ಕಳ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಸದರಿ ಶಿಬಿರಕ್ಕೆ ಆಗಮಿಸಿರುವ ಫಲಾನುಭವಿಗಳು ಶಿಬಿರ ಲಾಭ ಪಡೆಯಲು ತಿಳಿಸಿದರು ಮತ್ತು ಭಗವಾನ ಮಹಾವೀರ ಜೈನ ಆಸ್ಪತ್ರೆ ಬೆಂಗಳೂರು, “ಮಕ್ಕಳ ಬೆನ್ನುಹುರಿ ತಪಾಸಣೆ” ಶಿಬಿರದ ದಾನಿಗಳಾದ ಶ್ರೀ ವಿಜಯ ಬನಸಾಲೆ ಅವರ ಕಾರ್ಯವನ್ನು ಶ್ಲಾಘಿಸಿದರು.
ಅಪರ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಚಿಕ್ಕೋಡಿ, ವ್ಯಾಪ್ತಿಯ

ಅಥಣಿ,ರಾಯಬಾಗ,ಚಿಕ್ಕೋಡಿ,ಹುಕ್ಕೇರಿ,ಗೋಕಾಕ ತಾಲೂಕಾಗಳ ಮಕ್ಕಳ ಬೆನ್ನುಹುರಿ ತಪಾಸಣೆಗೆ ೨೦ ಮಕ್ಕಳು ಆಗಮಿಸಿದ್ದು ಅದರಲ್ಲಿ ೧೫ ಮಕ್ಕಳನ್ನು ಬೆನ್ನುಹುರಿ ಶಸ್ತç ಚಿಕಿತ್ಸಗೆ ಭಗವಾನ ಮಹಾವೀರ ಜೈನ ಆಸ್ಪತ್ರೆ ಬೆಂಗಳೂರು ಇಲ್ಲಿಗೆ ರೆಫರ್ ಮಾಡಲಾಯಿತು.
ಈ ಸಂದರ್ಭದಲ್ಲಿ ಭಗವಾನ ಮಹಾವೀರ ಜೈನ ಆಸ್ಪತ್ರೆ ಬೆಂಗಳೂರು ತಜ್ಞ ವೈದ್ಯರಾದ ಡಾ, ರಾಘವೇಂದ್ರ,ತಾಲೂಕಾ ಆರೋಗ್ಯಾಧಿಕಾರಿ ಡಾ, ಸುಕುಮಾರ ಭಾಗಾಯಿ, ಶ್ರೀ ಪಿ.ಬಿ.ಹಿರೇಮಠ,ಶಿಕ್ಷಣ ಇಲಾಖೆ. ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀ ಸಂತೋಷ ಕಾಂಬಳೆ, ಡಾ, ಸಿದ್ದರಾಮ. ಮಂಜುಳಾ ಬದನೆ ಡಾ, ಗೋವಿಂದ ಉಪ್ಪಾರ ಡಾ, ಮಲ್ಲಿಕಾರ್ಜುನ ಕೂಡಗಿ ಡಾ.ಯಶೋಧಾ ಬಬಲಿ ಡಾ.ಮಂಗಲ ಶಾಸ್ತ್ರಿ ಡಾ. ರಾಜಕುಮಾರ ಮನಗುತ್ತಿ ಡಾ ಸವಿತಾ ವಡ್ಡರ ಡಾ. ಗೀತಾ ನಿಲಜಗಿ ಡಾ. ರಮೇಶ ಮದಿಹಳ್ಳಿ ಡಾ, ವಿದ್ಯಾ ಪಾಟೀಲ ಡಾ, ಪ್ರಿಯಾಂಕಾ ದಡಪೆ, ಶರಣು ಲಬ್ಬಿ, ಚಿದಾನಂದ ಕಲಾದಗಿಮಠ, ರಾಜು ದತ್ತವಾಡೆ, ಸಿದ್ದೇಶ್ವರ ಬ್ಯಾಕುಡ, ಮಾಳಪ್ಪ ಖಿಲಾರಿ, ಸುಮನ ಪೂಜೇರಿ, ಪ್ರೀತಿ ಘಾಗರೆ, ಸರೋಜನಿ ತಳವಾರ, ಮಹಾದೇವಿ ಪಾತ್ರೋಟ, ಜಯಶೀಲಾ ಡಿ ಸುವರ್ಣಾ, ಪ್ರಧಾನ ಗಣೇಶ ಕುದನೋರೆ, ಪ್ರವೀಣ ಪಾಟೀಲ, ಸಾಗರ ಗಡಕರಿ ಹಾಗೂ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.

Share this post:

Leave a Reply

Your email address will not be published. Required fields are marked *