“ಸೆಪ್ಟೆಂಬರ್ 14ನೇ ತಾರೀಖಿನಂದು ಸಪ್ತಾಹ ಹೆಸರಿನಲ್ಲಿ ಹಿಂದೆ ದಿವಸ ಆಚರಣೆ ಮಾಡುವುದು ತಪ್ಪು,ಖಂಡನೀಯ”-ಕರವೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ನಮ್ಮ ಭಾರತ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ರಚನೆಯಾಯಿತು. ನಮ್ಮ ದೇಶದಲ್ಲಿ 22 ಭಾಷೆಗಳಿವೆ. ಯಾವ ಭಾಷೆಗಳಿಗೂ ರಾಷ್ಟ್ರಭಾಷೆ ಅಂತ ಅಧಿಕೃತವಾಗಿ ಆದೇಶವಿಲ್ಲ ಯಾವ ದಾಖಲೆನು ಇಲ್ಲ ಹಾಗಾಗಿ ಕೇಂದ್ರ ಸರ್ಕಾರ ಹಿಂದಿ ಭಾಷೆ ರಾಷ್ಟ್ರ ಭಾಷೆ ಅಂತ ಹೇಳಿಕೊಂಡು ಕರ್ನಾಟಕದ ಮೇಲೆ ಮತ್ತು ಬೇರೆ ಬೇರೆ ರಾಜ್ಯಗಳಿಗೆ ಹಿಂದಿ ಭಾಷೆ ರಾಷ್ಟ್ರಭಾಷೆ ಎಂದು ಜನರ ಮೇಲೆ ಒತ್ತಡ ತಂದಿಡುತ್ತಿದ್ದಾರೆ .ಅದಲ್ಲದೆ ಸೆಪ್ಟೆಂಬರ್ 14ನೇ ತಾರೀಖಿನಂದು ಸಪ್ತಾಹ ಹೆಸರಿನಲ್ಲಿ ಹಿಂದೆ ದಿವಸ ಆಚರಣೆ ಮಾಡುವುದು ತಪ್ಪು. ಖಂಡನೀಯ. ಕನ್ನಡಿಗರ ತೆರಿಗೆ ಹಣದಿಂದ ಹಿಂದಿ ದಿವಸ ಮಾಡುವುದು ಎಷ್ಟು ಸರಿ. ಉತ್ತರದ ರಾಜ್ಯಗಳಲ್ಲಿ ಎಂದಾದರೂ ಕನ್ನಡ ದಿವಸವನ್ನು ಆಚರಿಸುತ್ತಾರಾ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಯಾಕೆ ಹಿಂದಿ ರಾಜ್ಯಗಳಲ್ಲಿ ಹಿಂದಿ ದಿವಸ ಆಚರಿಸಿಕೊಳ್ಳಲಿ ಕರ್ನಾಟಕದಲ್ಲಿ ಹಿಂದಿ ದಿವಸ ಆಚರಣೆ ಬೇಕಾಗಿಲ್ಲ ನಾವು ಯಾವ ಭಾಷೆಯ ವಿರೋಧಿಗಳಲ್ಲ ಅವರವರಿಗೆ ಅವರ ಭಾಷೆ ಹೆಚ್ಚು ನಿಮ್ಮ ಮೇಲೆ ನಮ್ಮ ಭಾಷೆ ಹೇರಿಲ್ಲ .ನಮ್ಮ ಮೇಲೆ ನಿಮ್ಮ ಭಾಷೆಯನ್ನು ಹೇರಬೇಡಿ. ನಮಗೆ ಇಷ್ಟವಾದ ಭಾಷೆ ಕಲಿಯುತ್ತೇವೆ ಹಿಂದಿ ಕಲಿಯಬೇಕೆಂಬ ಆದೇಶ ಬೇಡ ಕರ್ನಾಟಕದಲ್ಲಿ ಹಿಂದಿ ದಿವಸ ಆಚರಣೆ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕರಾದ ಸಂಜು ಬಡಿಗೇರ್ ಒತ್ತಾಯಿಸುತ್ತಿದ್ದಾರೆ. ಚಂದ್ರಕಾಂತ್ ಹುಕ್ಕೇರಿ ಸಮಾಜ ಸೇವಕರು. ಸಂಜು ಹಿರೇಮಠ್ .ರಫಿಕ್ ಪಠಾಣ.ಪ್ರತಾಪ್ ಪಾಟೀಲ್. ಅಮೂಲ್ ನಾವಿ. ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours