ಬೆಂಗಳೂರು :–
ಧರ್ಮಸ್ಥಳದಲ್ಲಿ ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ಧರಿಸಿದ್ದೆವೆ ಎಂದು ಗ್ರಾಮಸ್ಥರ ಪರವಾಗಿ ಧರ್ಮಸ್ಥಳ ನಿವಾಸಿ ತುಕಾರಾಮ ಗೌಡ ಎಂಬುವವರು ಎಸ್ ಐ ಟಿ ಗೆ ಪತ್ರ ಬರೆದಿದ್ದಾರೆ.

ಮಾಧ್ಯಮಗಳಲ್ಲಿ ತೋರಿಸಲಾದ ದೂರುದಾರನನ್ನು ನಾವು ಗುರುತಿಸಿದ್ದೇವೆ.
ಆತ ವಿವಿಧ ಸ್ಥಳಗಳಿಗೆ ಶವ ಸಾಗಿಸುವುದನ್ನು ಹಾಗೂ ಹೂಳುತ್ತಿರುವುದನ್ನು ನಾವು ನೋಡಿದ್ದೇವೆ.
ಆತ ಕಡಿಮೆ ಜನಸಂಚಾರ ಇರುವ ಸ್ಥಳಗಳನ್ನು ಆರಿಸಿ ಶವಗಳನ್ನು ಹೂಳುತ್ತಿದ್ದ, ಆ “ಸ್ಥಳಗಳನ್ನು ತೋರಿಸಲು ಸಿದ್ಧರಿದ್ದೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.