ತುಮಕೊರು :–
ಗ್ಯಾರಂಟಿ ಕೊಡದೆ ರಸ್ತೆ, ಚರಂಡಿ ನಿರ್ಮಾಣ ಮಾಡಿದರೆ ಜನರು ಉದ್ಧಾರ ಆಗುತ್ತಾರಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು,
ನಾಳೆಯಿಂದ ಗ್ಯಾರಂಟಿ ಯೋಜನೆಯ ₹೫೮ ಸಾವಿರ ಕೋಟಿ ನಿಲ್ಲಿಸೋಣ. ರಸ್ತೆ ಮಾಡುವುದರಿಂದ ಹಾಗೂ ಇನ್ನೇನೊ ಕಾರ್ಯಕ್ರಮದಿಂದ ಬಡವರ ಜೀವನ ಏನಾಗುತ್ತದೆ?
ಉದ್ದಾರ ಆಗುತ್ತದೆಯಾ ಎಂದು ಪ್ರಶ್ನಿಸಿದರು. ನಾವು ರಸ್ತೆಗಳು, ಮನೆಗಳು, ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿಲ್ಲ. ಕೆಲಸಗಳು ನಿಧಾನ ಆಗಿರಬಹುದು ಎಂದು ಅವರು ಹೇಳಿದ್ದಾರೆ.





