“ಕೇಂದ್ರ ಸರ್ಕಾರದ ಆಡಳಿತದಲ್ಲಿ ದೇಶದಲ್ಲಾದ ಅಭಿವೃದ್ಧಿ,ಸಾಧನೆಯನ್ನು ಜನರು ಈಗಾಗಲೇ ಮನಗಂಡಿದ್ದು” – ಅಣ್ಣಾಸಾಹೇಬ ಜೊಲ್ಲೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–

“ಕಮಲ ಅರಳಿಸಲು ಸಜ್ಜಾದ ಕಾರ್ಯಕರ್ತರ ಪಡೆ”

ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಅಥಣಿ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಅಥಣಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರದ ಮಾಜಿ ಸಚಿವರು ಹಾಗೂ ವಿಜಯಪುರ ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ಶ್ರೀ ನರೆಂದ್ರ ಮೋದಿ ಜಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಮಾಡಿರುವ ಜನತೆ,ಕಳೆದ ಐದು ವರ್ಷದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿಪರ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸುವ ಭರವಸೆ ನೀಡಿದರು.ಕೇಂದ್ರ ಸರ್ಕಾರದ ಆಡಳಿತದಲ್ಲಿ ದೇಶದಲ್ಲಾದ ಅಭಿವೃದ್ಧಿ ಮತ್ತು ಸಾಧನೆಯನ್ನು ಜನರು ಈಗಾಗಲೇ ಮನಗಂಡಿದ್ದು, ಮೂರನೇ ಬಾರಿಯೂ ಮೋದಿಯವರನ್ನೇ ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಸಂಕಲ್ಪ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಥಣಿ ಮಾಜಿ ಶಾಸಕರಾದ ಶ್ರೀ ಮಹೇಶ ಕುಮಟಳ್ಳಿ,ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ ಅಪ್ಪಾಜಿಗೋಳ,ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಡಾ.ರಾಜೇಶ್ ನೇರ್ಲಿ, ಬೆಳಗಾವಿ ಜಿಲ್ಲಾ ವಿಭಾಗಿಯ ಪ್ರಭಾರಿಗಳಾದ ಶ್ರೀ ಚಂದ್ರಶೇಖರ ಕವಟಗಿ,ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ನಿಂಗಪ್ಪ ಕೊಕಲೆ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರುಗಳಾದ ಶ್ರೀ ಅಪ್ಪಾಸಾಹೇಬ ಅವತಾಡೆ, ಶ್ರೀ ಸಿದ್ದಪ್ಪಣ್ಣಾ ಮುದಕನ್ನವರ, ಶ್ರೀ ಬಸವರಾಜ ರೋಡಗಿ, ಅಪ್ಪಾಸಾಹೇಬ ನಾಯಿಕ, ಬಿಜೆಪಿ ಮುಖಂಡರುಗಳಾದ ಶ್ರೀ ಉಮೇಶರಾವ ಬಂಟೊಡ್ಕರ,ಶ್ರೀ ದರೆಪ್ಪಾ ಠಕ್ಕಣ್ಣವರ,ಶ್ರೀ ರವಿ ಪೂಜಾರಿ, ಶ್ರೀ ಸತ್ಯಪ್ಪಾ ಬಾಗೇನ್ನವರ,ಶ್ರೀ ಜಿನಗೌಡ ಪಾಟೀಲ,ಡಾ.ಶ್ರೀ ರವಿಶಂಕ ಶ್ರೀ ಪ್ರಭಾಕರ ಚವ್ಹಾಣ,ಒಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಗಿರೀಶ ಬುಟಾಳಿ,ಹಾಗೂ ಅನೇಕ ಮುಖಂಡರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours