ಚಿಕ್ಕೋಡಿ :–
ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ, ಅವರ ಸೇನೆಯಲ್ಲಿ 60 ಸಾವಿರ ಮುಸ್ಲಿಂ ಸೈನಿಕರಿದ್ದರು. 12 ಜಾತಿಗಳನ್ನು ಸೇರಿಸಿ ಸ್ವರಾಜ್ಯ ನಿರ್ಮಿಸಿ ಇತಿಹಾಸ ಸೃಷ್ಟಿಸಿದ್ದಾರೆ.ಇಂದಿನ ಯುವಕರು ಇತಿಹಾಸ ಓದಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ ಹೇಳಿದರು.
ತಾಲೂಕಿನ ಸದಲಗಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲೇ ಪ್ರಥಮ ಬಾರಿಗೆ ಮೀಸಲಾತಿ ನೀಡಿದ ಶಾಹು ಮಹಾರಾಜರು. ಸಯಾಜಿರಾವ ಗಾಯಕವಾಡಯವರು ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಿದರು ಮತ್ತು ಅವರು ಸಂವಿಧಾನವನ್ನು ಬರೆದರು.
ಇಂದು ಅದೇ ಮರಾಠ ಸಮುದಾಯವು ಮೀಸಲಾತಿಗಾಗಿ ಬೀದಿಗೆ ಬರಬೇಕಾಗಿದೆ. ಮೀಸಲಾತಿಯ ಅವಶ್ಯಕತೆ ಇದೆ. ಆದರೆ ಮೀಸಲಾತಿ ಮಾತ್ರ ಕೆಲಸ ಮಾಡುವುದಿಲ್ಲ ಆದರೆ ಮರಾಠ ಬಂಧುಗಳು ತಮ್ಮ ಮಕ್ಕಳನ್ನು ಜಗಳಕ್ಕೆ ಕಳುಹಿಸುವ ಬದಲು ಒಳ್ಳೆಯ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಸಚಿವ ಲಾಡ್ ಹೇಳಿದರು.
ಶಿವಾಜಿ ಮಹಾರಾಜರು ತಮ್ಮ ಕಾಲದಲ್ಲಿ ಒಬ್ಬ ಮಹಿಳೆಯನ್ನೂ ಬಂಧಿಸಿಲ್ಲಿಲ್ಲ .ಶಿವಾಜಿ ಮಹಾರಾಜರ ಆದರ್ಶವನ್ನು ಇಂದಿನ ಯುವಕರು ಅನುಸರಿಸಬೇಕಾಗಿದೆ. ಯಾವುದೇ ಪಕ್ಷದಲ್ಲಿ ಇದರೂ ಮರಾಠ ಸಮುದಾಯದವರು ಸಮುದಾಯಕ್ಕಾಗಿ ಒಂದಾಗಬೇಕು.
ಮರಾಠ ಸಮಾಜ ಒಗ್ಗಟ್ಟಾಗಿ ದೇಶದಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಚಿಂತನೆ ನಡೆಸಬೇಕು.
ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರೂ ಶಿವಾಜಿ ಮಹಾರಾಜರ ಪ್ರತಿಮೆಗೆ 25 ಲಕ್ಷ ರೂಪಾಯಿ ನೀಡಿ ಅವರ ಕನಸನ್ನು ನನಸು ಮಾಡಿದ್ದಾರೆ. ಅವರಿಗೆ ಸಮುದಾಯ ವತಿಯಿಂದ ಧನ್ಯವಾದ ಹೇಳುತ್ತೇನೆ.
ಪ್ರಕಾಶ ಹುಕ್ಕೇರಿ ಹಿರಿಯ ನಾಯಕರಾಗಿದ್ದು, 75 ರ ಹರೆಯದಲ್ಲೂ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗುವ ಸಮರ್ಪಕ ನಾಯಕ.
ನಾನು ಮರಾಠಾ ಸಮಾಜದ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಇತಿಹಾಸವನ್ನು ಬದಿಗಿಟ್ಟು ಮುಂದೇನು ಮಾಡಬೇಕೆಂದು ಯೋಚಿಸಬೇಕಾಗಿದೆ ಎಂದು ಹೇಳಿದರು.
ದೆಹಲಿ ವಿಶೇಷ ಪ್ರತಿನಿಧಿ ವಿಧಾನ ಪರಿಷತ ಪ್ರಕಾಶ ಹುಕ್ಕೇರಿ ಮಾತನಾಡಿ ಈ ಪ್ರತಿಮೆಯನ್ನು ಸ್ಥಾಪಿಸಿದ ಕೀರ್ತಿ ಗಣೇಶ ಹುಕ್ಕೇರಿ ಅವರಿಗೆ ಸಲ್ಲುತ್ತದೆ. ಕೇಂದ್ರೀಯ ವಿದ್ಯಾಲಯ, ಡಿಪ್ಲೊಮಾ ಕಾಲೇಜು, ಬಸ್ ನಿಲ್ದಾಣ ಸೇರಿದಂತೆ ಸದಲಗಾ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ.ಬರುವ ವಿಧಾನಸಭಾ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಹಾಗೂ ಸದಲಗಾ ತಾಲೂಕಾಗಬೇಕು ಎಂದು ಮುಖ್ಯಮಂತ್ರಿ ಹಾಗೂ ಸಚಿವ ಲಾಡ ಅವರಿಗೆ ಆಗ್ರಹಿಸಿದರು.
ಸದಲಗಾದಲ್ಲಿ ಸಮಾಜ ಬಾಂಧವರ ಬೇಡಿಕೆಯಂತೆ ಮರಾಠಾ ಭವನಕ್ಕೆ 2 ರೂಪಾಯಿ ಕೋಟಿ ರೂಪಾಯಿ ನೀಡಲಾಗುವುದು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಪ್ರಕಾಶ ಕದಂ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ರವರು 25 ಲಕ್ಷ ರೂಪಾಯಿ ನೀಡಿ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.
ಅಲ್ಲದೇ ಈ ಭಾಗದಲ್ಲಿ ನೀರಿನ ಯೋಜನೆಗಳನ್ನು ತರುವ ಮೂಲಕ ಈ ಭಾಗದ ರೈತರ ದಾಹ ನೀಗಿಸಿದ್ದಾರೆ. ಪ್ರಕಾಶ ಹುಕ್ಕೇರಿ ಶಾಸಕ ಹ್ಯಾಟ್ರಿಕ್ ಶಾಸಕರೂ ಆಗಿದ್ದಾರೆ. ಜೀವನವನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಶಿವಾಜಿ ಮಹಾರಾಜರು ಆದರ್ಶಪ್ರಾಯ ಉದಾಹರಣೆ. ಈ ಸ್ಮಾರಕ ನಮಗೆಲ್ಲರಿಗೂ ಶಕ್ತಿ ತುಂಬುತ್ತದೆ.
ಶ್ರೀ ದತ್ತಗುರು ಕಾರ್ಖಾನೆಯ ನಿರ್ದೇಶಕ ಬಾಳಾಸಾಹೇಬ ಪಾಟೀಲ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ, ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಶಿವಾಜಿ ಮೂರ್ತಿಗಾಗಿ 25 ಲಕ್ಷ ರೂಪಾಯಿ ನೀಡಿದ್ದಾರೆ. ಅವರಿಗೆ ಮರಾಠಾ ಸಮಾಜದ ಬಾಂಧವರ ಪರವಾಗಿ ಧನ್ಯವಾದಗಳು ಹೇಳುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಸುಪ್ರಿಯಾ ದೇಸಾಯಿ, ವೀರಕುಮಾರ ಪಾಟಿಲ, ಉತ್ತಮ ಪಾಟೀಲ್, ರಾಹುಲ ಜಾರಕಿಹೊಳಿ, ಲಕ್ಷ್ಮಣರಾವ ಚಿಂಗಳೆ, ಅದ್ವಿಕ ಹುಕ್ಕೇರಿ, ಬಾಳಾಸಾಹೇಬ್ಲ ಪಾಟೀಲ್, ನಂದರಾಜ ನಿಂಬಾಳ್ಕರ, ಸುಮಿತ್ರಾ ಉಗಳೆ, ಸುಪ್ರಿಯಾ ಪಾಟೀಲ, ಮೋಹನ್ಲ ಶಿತೋಳೆ,ಗಜಭಾವು ಪಾಟೀಲ, ಅನಿರುದ್ಧ ಪಾಟೀಲ, ಪ್ರದೀಪ ಜಾಧವ, ಅನಿಲ ಮಾನೆ, ಪಾಂಡುರಂಗ ಮಾನೆ, ಈರಪಾನ ಬೇಪಾರಿ, ರಾಜು ಗುಂಡಕಲ್ಲೆ, ಸಂತೋಷ ನವಲೆ, ಮರಾಠ ಜೈದೀಪ ಮಹೇಕರ, ಸಂತೋಷ ಹವಾಲ್ದಾರ, ಪರಶುರಾಮ ಸಾಳುಂಕೆ ಅನಿರುದ್ಧ ಪಾಟೀಲ ಸಚಿನ ಲೋಹರ್, ದೀಪಕ ಸಂಕಪಾಲ, ಅರಿಹಂತ ಶಿತೋಳೆ, ರಾಮಾ ಮಾನೆ ಸೇರಿದಂತೆ ಪುರಸಭೆ ಸದಸ್ಯರು ಅಪಾರ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.