ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘ, ಧುಳಗನವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಲ್ಲಿ ಜರುಗಿದ ಶ್ರೀ ಕೃಷ್ಣ ಪಾರಿಜಾತ ಜಾನಪದ ಕಲಾಮೇಳ

ಚಿಕ್ಕೋಡಿ :–

ಶ್ರೀ ಕೃಷ್ಣ ಪಾರಿಜಾತ ಬೆಳೆದುಕೊಂಡು ಬಂದಿರುವುದು ಬಹಳ ವರ್ಷ ಹಿಂದಿನಿಂದ, ಉತ್ತರ ಕರ್ನಾಟಕದ ಗಂಡು ಮೆಟ್ಟಿನ ಕಲೆ ನಮ್ಮ ನಾಡಿನ ಬಯಲಾಟ ಜಾನಪದ ಕಲೆಗಳು ಉಳಿದರೆ ನಮ್ಮ ಭವ್ಯ ಸಂಸ್ಕೃತಿ ಉಳಿಯುತ್ತದೆ ಕಲಾವಿದರಿಗೆ ಉತ್ತೇಜನ ನೀಡಿ ಬೆಳೆಸಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಯರು ವಾಯ್.‌ ಬಿ. ಖೋತ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಇವರು ಕಳೆದದ ದಿನಾಂಕ 4 ಏಪ್ರೀಲ್‌ 2025 ರಂದು ತಾಲುಕಿನ ಹಂಡ್ಯಾನವಾಡಿ ಶ್ರೀ ಹಾಲಸಿದ್ದನಾಥ ದೇವಸ್ಥಾನದ ಪ್ರಾಂಗಣದಲ್ಲಿ ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘ, ಧುಳಗನವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಲ್ಲಿ ಜರುಗಿದ ಶ್ರೀ ಕೃಷ್ಣ ಪಾರಿಜಾತ ಜಾನಪದ ಕಲಾಮೇಳವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಮಾರುತಿ ಶರಣರು ಕಂಕಣವಾಡಿ ಇವರು ಮಾತನಾಡಿ ಧಾರ್ಮಿಕ ಪರಂಪರೆ ಉಳಿಸಲು ಕಲಾವಿದರ ಪಾತ್ರವು ಕೂಡ ಪ್ರಮುಖವಾಗಿದೆ. ಭಜನೆ, ಸಂಗೀತ ಕೇಳುವುದರಿಂದ ಭಕ್ತಿ ಭಾವ ಮೂಡುವುದರ ಜೊತೆಗೆ ಹಾಡುಗಾರರಿಗೆ ಕೇಳುಗಾರರಲ್ಲಿ ಪರಮಾನಂದ ಸಿಗುತ್ತದೆ ಎಂದರು.

ವೇದಿಕೆಯ ಮೇಲೆ ವಿಜಯ ವಾಘಮಾರೆ, ಬಿ.ಆರ್. ಗೋನೆ, ಪ್ರಶಾಂತ, ಹಾಲಪ್ಪ ಮಾದಪ್ಪಗೋಳ, ಸುನೀಲ ಗೋನೆ, ಹಾಲಪ್ಪ ಸನದಿ, ಲಕ್ಷ್ಮಣ ಜಿಗನ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಪಾರಿಜಾತ ಮಹಿಳಾ ಹಿರಿಯ ಕಲಾವಿದರಾದ ಕಸ್ತೂರಿ ಮಣ್ನೀಕೆರಿ ಹಾಗೂ ಮುತ್ತವ್ವ ಕೇಸರಗೋಪ್ಪ ಇವರಿಗೆ ಶಾಲು ಹೋದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಾಳಪ್ಪ ಬೋರಗಲ್ಲಿ ತಂಡದವರಿಂದ ಶ್ರೀ ಕೃಷ್ಣ ಪಾರಿಜಾತ, ಕುಂಗಟೋಳಿಯ ಸಂಗಮೇಶ್ವರ ಭಜನಾ ತಂಡದಿಂದ ಭಜನಾ ಪದಗಳು, ಶಂಕರ ಖೋತ ಹಾಗೂ ತಂಡದವರಿಂದ ತಮಟೆವಾದನ ಹಾಗೂ ವಿವಿಧ ತಂಡದದಿಂದ ವಿವಿಧ ಸಾಂಸ್ಕೃತಿಕ ಕಲಾಪ್ರದರ್ಶನ ನೀಡಿ ನೋಡುಗರಿಗೆ ಮನರಂಜನೆ ನೀಡಿದರು. ಸುಜಾತ ಮಗದುಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭೀಮಾ ವರಗೆ ವಂದಿಸಿದರು.

Share this post:

Leave a Reply

Your email address will not be published. Required fields are marked *