“ಕೆ.ಎಲ್ ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇಮಕ ಆಗೋದು ಬಹುತೇಕ ಖಚಿತವಾಗಿದೆ”

ಚಿಕ್ಕೋಡಿ :–

ಬಿಜೆಪಿಯಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕರಾದ ಪ್ರಭಾಕರ ಕೋರೆ ಅವರಿಗೆ ಮಹತವದ ಹುದ್ದೆ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.

ಬೆಳಗಾವಿ-ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಕೆ.ಎಲ್ ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇಮಕ ಆಗೋದು ಬಹುತೇಕ ಖಚಿತವಾಗಿದೆ.ಭಾರತ-ಪಾಕ್ ಮಧ್ಯೆ ಕದನ ಆರಂಭವಾಗದಿದ್ದರೆ ಇಷ್ಟೊತ್ತಿಗಾಗಲೇ ರಾಷ್ಟ್ರಪತಿಗಳಿಂದ ಆದೇಶ ಹೊರಬಿದ್ದು ಕೋರೆಯವರು ತಮ್ಮ ರಾಜಕೀಯ ಜೀವನದ 2ನೇ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಈಗ ಭಾರತ -ಪಾಕ್ ಮಧ್ಯೆ ಕದನ ವಿರಾಮ ಘೋಷಣೆ ಆಗಿದ್ದು, ಎರಡು ದಿನಗಳಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ.

1947 ಆಗಸ್ಟ್ 01ರಂದು ಅಂಕಲಿಯಲ್ಲಿ ಬಸವಪ್ರಭು-ಶಾರದಾದೇವಿ ದಂಪತಿಯ ಉದರದಲ್ಲಿ ಜನಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕೋರೆಯವರು ಶಿಕ್ಷಣ

ವೃದ್ಯಕೀಯ, ಸಹಕಾರ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ತಮ್ಮ ಕಾರ್ಯತತ್ಪರತೆ, ಸಂಘಟನಾ ಚಾತುರ್ಯದಿಂದ ಕೆ.ಎಲ್.ಇ ಸಂಸ್ಥೆಯನ್ನು ಹಳ್ಳಿಯಿಂದ ದಿಲ್ಲಿಗೆ, ದಿಲ್ಲಿಯಿಂದ ದುಬೈ ವರೆಗೆ ವಿಸ್ತರಿಸಿದ ಕೀರ್ತಿ ಡಾ. ಪ್ರಭಾಕರ್ ಕೋರೆ ಅವರಿಗೆ ಸಲ್ಲುತ್ತದೆ.

1984ರಲ್ಲಿ ಕೆ. ಎಲ್. ಇ ಕಾರ್ಯುಧ್ಯಕ್ಷರಾಗಿ ಕೋರೆ ಅವರು ಅಧಿಕಾರ ವಹಿಸಿಕೊಂಡಾಗ 38 ಅಂಗ ಸಂಸ್ಥೆಗಳನ್ನು ಹೊಂದಿತ್ತು. ಕೋರೆಯವರ ಪರಿಶ್ರಮದ ಫಲವಾಗಿ ಕೆ. ಎಲ್‌. ಇ ಈಗ 300 ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿದ್ದು ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿದೆ.

ರಾಜಕೀಯ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಕೋರೆ ಅವರು ಒಂದು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ, ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

ಬಿಜೆಪಿಯ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡಿರುವ ಕೋರೆಯವರಿಗೆ ಮಹತ್ವ ಹುದ್ದೆ ನೀಡುವ ಮೂಲಕ ಲಿಂಗಾಯತ ಮತಗಳ ಮತಗಳನ್ನು ಸೆಳೆಯುವ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದಾಗಿದೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷತ್ರದಲ್ಲಿ ಕ್ರಾಂತಿ ಮಾಡಿರುವ ಪ್ರಭಾಕರ ಕೋರೆ ಅವರು ಗೋವಾ ರಾಜ್ಯದ ರಾಜ್ಯಪಾಲರಾಗಿ ನೇಮಕ ಆಗೋದು ಖಚಿತ ಎನ್ನುವ ಮಾಹಿತಿ ನಂಬಲರ್ಹವಾದ ಮೂಲ ಗಳಿಂದ ಲಭ್ಯವಿರುವ ಪ್ರಕಾರ.

Share this post:

Leave a Reply

Your email address will not be published. Required fields are marked *