ಚೌಸನ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕುರಿತು ಒಂದು ದಿನದ ಕಾರ್ಯಗಾರ


ಚಿಕ್ಕೋಡಿ.ಜೂ14 :–

. ಕೃತಕ ಬುದ್ಧಿಮತ್ತೆ (ಎಐ) ಆಧರಿತ ಸಾಧನಗಳ ಸಹಾಯ ಪಡೆದುಕೊಂಡು ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಬೇಕೆಂದು ಎಂದು ಪ್ರಾಧ್ಯಾಪಕರಾದ ಡಾಕ್ಟರ್ ವಿನೋದ್ ಬಿರಾದರ್ ಕೆ ಎಲ್ ಇ. ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಮಹಾ ವಿದ್ಯಾಲಯ ಚಿಕ್ಕೋಡಿ ಇವರು ಹೇಳಿದರು. ಇತ್ತೀಚಿಗೆ ಚೌಸನ್ ಶಿಕ್ಷಣ ಮಾಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಎನ್ನುವ ವಿಷಯದ ಕಾರ್ಯಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡಿ ಕಲಿಕಾ ಗುಣಮಟ್ಟ ವೃದ್ದಿಗೆ ಎಐ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಹಾಗೂ ಗ್ರಾಮೀಣ ಮತ್ತು ನಗರ ಶಿಕ್ಷಣದ ನಡುವಿನ ಅಂತರ ತಗ್ಗಿಸುವಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಪರಿವರ್ತನೆ ಮಾಡುವಲ್ಲಿ, ಭಾಷೆಗಳಲ್ಲಿ ಹೇಗೆ ಎಐ ಕೃತಕ ಬುದ್ಧಿಮತ್ತೆ ಪರಿಣಾಮಕಾರಿ ಬಳಕೆ ಮಾಡಿಕೊಳ್ಳಬಹುದು. ಎಂಬುದರ ಬಗ್ಗೆ ವಿವರಿಸಿದರು.

ಶಿಕ್ಷಕರ ಪಠ್ಯಕ್ರಮದ ರೂಪರೇಷೆ, ತರಗತಿಯ ನಿರ್ವಹಣೆ ಅಧ್ಯಯನ ಯೋಜನೆಗಳಲ್ಲಿ ಚಾಟ್ ಜಿಪಿಟಿ, ಕೋ ಪೈಲೆಟ್ ಮತ್ತಿತ್ತರ ಎಏ ಆಧರಿತ ಸಾಧನೆಗಳ ಸಹಾಯ ಪಡೆದುಕೊಂಡು ಮಕ್ಕಳಲ್ಲಿ ಕೃತಕ ಬುದ್ಧಿಮತ್ತೆ ಬಗ್ಗೆ ಕುತೂಹಲ ಮೂಡಿಸಿ ತಂತ್ರಜ್ಞಾನದ ಸದ್ಬಳಕೆ ಬಗ್ಗೆ ಬೆಳಕು ಚೆಲ್ಲಿದರು. ನಾವು ಇವತ್ತಿನ ದೈನಂದಿನ ಚಟುವಟಿಕೆಗಳ ಬಹು ಭಾಗವನ್ನು ಆಧುನಿಕ ತಂತ್ರಜ್ಞಾನಗಳ ಮೂಲಕ ನಡೆಸುತ್ತಿದ್ದೇವೆ ನಮ್ಮ ಎಲ್ಲಾ ಕೆಲಸಗಳಿಗೂ ಒಂದಲ್ಲ ಒಂದು ರೀತಿಯ ಸಾಧನ ಬೇಕು ಅದರಲ್ಲಿ ಇತ್ತೀಚಿಗೆ ಪ್ರಚಲಿತದಲ್ಲಿರುವ ಎಏ ನಮಗೆ ಅರಿವಿಲ್ಲದೆ ನಮ್ಮ ಸುತ್ತ ಆವರಿಸಿಕೊಂಡಿದೆ ಎಂದು ಹೇಳಿದರು.

ಇಂದು ಎ ಐ ತಂತ್ರಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಇದರಿಂದ ಮುಂಬರುವ ದಿನಗಳಲ್ಲಿ ಕೆಲಸ ಕಾರ್ಯಗಳು ಬದಲಾಗಬಹುದು ಎಐ ಅನ್ನು ಬುದ್ಧಿವಂತಿಕೆಯಿಂದ ಬಳಸುವುದು ಮತ್ತು ಅದರ ಕೌಶಲ್ಯಗಳನ್ನು ಬೆಳೆಸುವುದು ಭವಿಷ್ಯದಲ್ಲಿ ನಮ್ಮ ಯಶಸ್ಸಿನ ಕೀಲಿ ಕೈ ಆಗಿರುತ್ತದೆ ಕೃತಕ ಬುದ್ಧಿಮತ್ತೆಯಿಂದ ಬರುವ ಸಾಧನಗಳನ್ನು ಸಮರ್ಥವಾಗಿ ಬಳಸಿದಾಗ ನಾವು ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಡಾ. ಕನಕಾಚಲ ಕನಕಗಿರಿ ಯವರು ಒಂದು ದಿನದ ಕಾರ್ಯಾಗಾರ ವಿಷಯ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ನಿಧಾನವಾಗಿ ಪ್ರತಿಯೊಂದು ವಲಯವನ್ನು ಪ್ರವೇಶಿಸುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗೆ ಕಾರಣವಾಗಿದೆ ಎಂದರು ಕಾರ್ಯಗಾರದ ಮುಖ್ಯ ಉದ್ದೇಶಗಳು ಹಾಗೂ ಅದರ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು
ಪ್ರಾಧ್ಯಾಪಕ ರಾದ
ಡಾ‌.ಎನ್.ಎಸ್. ಶಿಂದೆ ಸ್ವಾಗತ ಹಾಗೂ ಅತಿಥಿಗಳ ಪರಿಚಯ ಮಾಡಿದರು
ಇದೇ ಸಂದರ್ಭದಲ್ಲಿ ಪ್ರ ಶಿಕ್ಷಣಾರ್ಥಿಗಳಾದ ಪ್ರಿಯಾಂಕ ಸಿಂಗಾಯಿ, ಅನಿತಾ ಪೊದ್ದಾರ್ ಕಾರ್ಯಾಗಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ಪ್ರಶಿಕ್ಷಣಾರ್ಥಿಯಾದ ಐಶ್ವರ್ಯ ನಾವಿ, ಮತ್ತು ಸಂಗಡಿಗರು ಪ್ರಾರ್ಥನ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಎಂ.ಎಚ್.ರಾವುತ್. ಪ್ರಶಾಂತ್ ಪತ್ತಾರ್ ಉಪಸ್ಥಿತರಿದ್ದರು. ವೈಶಾಲಿ ಗಿರಿಮಲ್ಲನ್ನವರ್ ಹಾಗೂ ಶಿಲ್ಪಾ ಪಾಟೀಲ್
ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಧ್ಯಾಪಕರಾದ ಎಸ್ ಎಮ್ ಚಂದ್ಗಡೆ ವಂದಿಸಿದರು.

Share this post:

Leave a Reply

Your email address will not be published. Required fields are marked *