ಚಿಕ್ಕೋಡಿ :–
ಜೊಲ್ಲೆ ಗ್ರೂಪ್
ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ
೧೧ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಒತ್ತಡದ ದಿನಗಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಅತ್ಯಂತ ಮಹತ್ವದ್ದು. ಇದರ ನಿಟ್ಟಿನಲ್ಲಿ ಜೊಲ್ಲೆ ಗ್ರೂಪ್ನ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಭಾಗದ ಶಾಸಕರು ಹಾಗೂ ಸಂಸ್ಥೆಯ ಸಹಸಂಸ್ಥಾಪಕರಾದ ಶಶಿಕಲಾ ಜೊಲ್ಲೆ ಇವರ ಮಾರ್ಗದರ್ಶನದಲ್ಲಿ ಜೊಲ್ಲೆ ಗ್ರೂಪ್ನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ೧೧ನೇ ಯೋಗ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ತಾಲುಕಿನ ನಣದಿ ಶಿಕ್ಷಣ ಸಂಕುಲದಲ್ಲಿ ಆಚರಿಸಲಾಯಿತು.

ಯೋಗ ಪ್ರಾತ್ಯಕ್ಷಿಕೆಯನ್ನು ಪತಂಜಲಿ ಯೋಗ ಪೀಠದ ಯೋಗ ಶಿಕ್ಷಕರಾದ ಸಂಜಯ ಕೇಸ್ತಿ ನೀಡಿ ವಿವಿಧ ಆಸನಗಳ ಮಹತ್ವ ಮತ್ತು ದಿನನಿತ್ಯ ಅವುಗಳನ್ನು ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆಗುವ ಲಾಭಗಳ ಕುರಿತು ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಗುಜರಾತಿನ ಅಹಮದಾಬಾದ್ ನಗರದಲ್ಲಿ ಜರುಗಿದ ಬುದ್ದಿಮಾಂದ್ಯ ಮಕ್ಕಳ ರಾಷ್ಟçಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಯಾದ ಮಾರುತಿ ಸುನೀಲ ಮಧಾಳೆ ವಿಶೇಷ ಸಾಧನೆ ಮಾಡಿದ ಪ್ರಯುಕ್ತ ಅಭಿನಂದಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಸಹಕಾರಿಯ ಪ್ರಧಾನ ವ್ಯವಸ್ಥಾಪಕರಾದ ಬಿ.ಎ.ಗುರವ, ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಎಮ್.ಎಮ್.ಪಾಟೀಲ, ಎಣ್ಣೆ ಬೀಜ ಬೆಳೆಗಾರರ ಸಹಕಾರಿಯ ಕಾರ್ಯದರ್ಶಿಯಾದ ಹಸನ ನಾಯಿಕವಾಡಿ, ಅಂಗ ಸಂಸ್ಥೆಗಳ ಉಪಪ್ರಧಾನ ವ್ಯವಸ್ಥಾಪಕರು, ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಎ.ಕೆ.ಮಾಯನ್ನವರ ನಿರೂಪಿಸಿದರು ಹಾಗೂ ವ್ಹಿ.ಆರ್.ಭಿವಸೆ ಸ್ವಾಗತಿಸಿದರು.