ಚಿಕ್ಕೋಡಿ :–
ಹೊಸದಾಗಿ ಹಂಚಿಕೆಯಾಗಿರುವ ಮತಗಟ್ಟೆ ಮಟ್ಟದ ಅಧಿಕಾರಿ ಕೆಲಸದ ಆದೇಶವನ್ನು ಹಿಂಪಡೆಯಲು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ಕಾರ್ಯದರ್ಶಿಗಳ ಹಾಗೂ ದ್ವಿ.ದ.ಲೆಕ್ಕ ಸಹಾಯಕರ ನೌಕರರ ಕ್ಷೇಮಾಭಿವೃದ್ಧಿ ಸಂಘ ಚಿಕ್ಕೋಡಿತಾಲೂಕಾ ಸಮಿತಿಯಿಂದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎನ್ ವಣ್ಣೂರ ಅವರಿಗೆ ವಿನಂತಿ ಮನವಿ.ಸಲ್ಲಿಸಿದ್ದರು.
ಕಾರ್ಯದರ್ಶಿಗಳು ತಮ್ಮ ಜಾಬ ಚಾರ್ಟ ಪ್ರಕಾರ ತೇರಿಗೆ ನಿರ್ವಹಣೆ ಮತ್ತು ತೇರಿಗೆ ಪರಿಷ್ಕರಣೆ, ಬೀದಿ ದೀಪ ಮತ್ತು ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್ ಬಿಲ್ಲಗಳ ನಿರ್ವಹಣೆ ಹಾಗೂ ಬಾಕಿ ಮೊತ್ತದ ಪರಿಶೀಲನೆ, ವಾರ್ಡ ಸಭೆ, ಗ್ರಾಮ ಸಭೆ, ಸ್ಥಾಯಿ ಸಮಿತಿ ಸಭೆ ಮತ್ತು ಇನ್ನಿತರ ಸಭೆಗಳು, ಜಮಾ ಬಂದಿ, ತೆರಿಗಳ ಬೇಡಿಕೆ ಮತ್ತು ವಸೂಲಾತಿ ಸಂಬಂಧಿಸಿದ ಎಲ್ಲ ಕಾರ್ಯಗಳು, ಗ್ರಾಮ ಪಂಚಾಯತಿಯ ನೌಕರರ ಸೇವಾ ವಿಷಯಗಳನ್ನು, ಸಾರ್ವಜನಿಕ ದೂರುಗಳ ಪರಿಶೀಲನೆ, ೨೦೦೫ ಮಾಹಿತಿ ಹಕ್ಕು ಅರ್ಜಿಗಳ ನಿರ್ವಹಣೆ ಹಾಗೂ ಜನನ ಮರಣ ಉಪನೋಂದಣಾಧಿಕರಿಳ ಕಾರ್ಯ ಮತ್ತು
ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ತಮ್ಮ ಜಾಬ ಚಾರ್ಟ ಪ್ರಕಾರ ಬಜೆಟ್ ಮಂಡನೆ, ಲೆಕ್ಕ ಪರಿಶೋಧನಾ ಸಮಿತಿಗೆ ಸಂಬಂಧ ಪಟ್ಟ ಕಾರ್ಯನಿರ್ವಹಣೆ, ರಶೀದಿ ಪುಸ್ತಗಳ ನಿರ್ವಹಣೆ ದಿನ ವಹಿ ವಸೂಲಾತಿ ಪರಿಶೀಲನೆ, ವಿವಿಧ ಯೋಜನೆಗಳ ಕ್ರೀಯಾ ಯೋಜನೆ ತಯಾರಿಸುವುದು, ತೆರಿಗೆ ವಸೂಲಾತಿ ಮತ್ತು ಬಾಕಿ ವಿವರವನ್ನು ತಯಾರಿಸುವುದು, ಕಛೇರಿ ನಗದು ಪುಸ್ತಕ ನಿರ್ವಹಣೆ ಎಲ್ಲಾ ಬ್ಯಾಂಕಿನ ಕಚೇರಿ ಖಾತೆಗಳ ಪಾಸ್ ಪುಸ್ತಕ ಮತ್ತು ಚೆಕ್ ಪುಸ್ತಗಳ ನಿರ್ವಹಣೆ, ಮಾಸಿಕ ವಾರ್ಷಿಕ ಲೆಕ್ಕ ಪತ್ರಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ ಬಿಲ್ಲುಗಳ ತಯಾರಿಕೆ, ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರ ಗೌರವಧನ ಉಪವೇಶನ ಶುಲ್ಕ ಪಾವತಿ ಮತ್ತು ಪ್ರಯಾಣ ಭತ್ಯೆ ಬಿಲ್ಲುಗಳ ತಯಾರಿಕೆ, ಗಣಕಯಂತ್ರದಲ್ಲಿ ಪಂಚ ತಂತ್ರ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಜನನ ಮರಣ ಉಪನೋಂದಣಾಧಿಕಾರಿಗಳ ಕಾರ್ಯ ನಿರ್ವಹಿಸುತ್ತಿದ್ದೇವೆ.
ಎಲ್ಲ ಕಾರ್ಯವನ್ನು ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಮತ್ತು ದ್ವಿತೀಯ ಲೆಕ್ಕ ದರ್ಜೆ ಸಹಾಯಕರಿಗೆ ಇದ್ದು, ಅದರಲ್ಲಿ ಬಹಳಷ್ಟು ಜನರಿಗೆ ಎರಡು ಪಂಚಾಯತಿಗಳ ಪ್ರಭಾರವನ್ನು ಇರುತ್ತವೆ. ಈಗ ಮತಗಟ್ಟೆ ಮಟ್ಟದ ಅಧಿಕಾರಿ ಕೆಲಸ ಕೊಟ್ಟರೆ ತೀರಾ ತ್ರಾಸದಾಯಕವಾಗುತ್ತದೆ.
ಕಾರಣ ಮಾನ್ಯರವರು ಈಗ ಹೊಸದಾಗಿ ಹಂಚಿಕೆಯಾಗಿರುವ ಮತಗಟ್ಟೆ ಮಟ್ಟದ ಅಧಿಕಾರಿ ಕೆಲಸದ ಆದೇಶವನ್ನು ಹಿಂಪಡೆಯಲು ಎಲ್ಲ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘದಿಂದ ಒತ್ತಾಯಿಸುತ್ತೇವೆ ಅಂತಾ ವಿನಂತಿ ಮನವಿಯನ್ನು ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಎಸ್ ಎಸ್ ಮಠದ ಶಿವಾನಂದ ಶಿರಗಾಂವೆ ಹಾಗೂ ಅಧ್ಯಕ್ಷರಾದ ರಾಜು ಚನ್ನವರ, ಗೌರವಾಧ್ಯಕ್ಷರಾದ ತಾತ್ಯಾಸಾಹೇಬ ಭಬಗೌಡಾ, ಪ್ರಧಾನ ಕಾರ್ಯದರ್ಶಿರಾದ ದುಂಡಪ್ಪಾ ಭಜನಾಯಕ, ಮೀನಾಕ್ಷಿ ಕಮತೆ, ರಾಜು ಟೂಪುಗೋಳ, ದ್ರೌಪದಿ ವಂಜೀರೆ, ಸಿಕಂದರ ಸಯ್ಯದ ,ಬಸವರಾಜ ಬೋರಗಲ್ಲ,ನಿಂಗಪ್ಪಾ ಮಾಗಿ,ಆಶಾ ಮೋಪಗಾರ, ಪ್ರಮೋದ ಮಲ್ಲವ್ವಗೋಳ,ಬಾಬು ಕಾಂಬಳೆ,ಉಪಸ್ಥಿತರಿದ್ದರು