“ಬೆಂಗಳೂರಿಗೆ ಬನ್ನಿ ಸಿಎಂ ಜತೆ ಮಾತನಾಡಿ ನವೆಂಬರ್ ೭ ರ ೨ ಗಂಟೆ ಒಳಗೆ ನಿಮ್ಮ ಬೇಡಿಕೆಗೆ ಸರ್ಕಾರ ಪರಿಹಾರ ನೀಡುತ್ತದೆ” : ಸಚಿವ ಎಚ್.ಕೆ.ಪಾಟೀಲ್

ಬೆಳಗಾವಿ :–

“ಬೆಳಗಾವಿಯಲ್ಲಿ ಪ್ರತಿಭಟನಾನಿರತ ರೈತರ ಜತೆ ಸಚಿವ ಎಚ್.ಕೆ.ಪಾಟೀಲ್ ಮಾತುಕತೆ ವಿಫಲವಾಯಿತು”

ಕಬ್ಬು ಬೆಲೆ ನಿಗದಿಗಾಗಿ ಗೋಕಾಕ ತಾಲೂಕಿನ ಗುರ್ಲಾಪೂರದಲ್ಲಿ ನಡೆಯುತ್ತಿರುವ ಪ್ರತಿಭಟನಾನಿರತ ರೈತ ಮುಖಂಡರೊಂದಿಗಿನ ಸಚಿವ ಎಚ್‌.ಕೆ.ಪಾಟೀಲ್ ಮಾತುಕತೆ ವಿಫಲವಾಗಿದೆ.

ಈ ವೇಳೆ ಮಾತನಾಡಿದ ಸಚಿವರು, ಬೆಂಗಳೂರಿಗೆ ಬನ್ನಿ ಸಿಎಂ ಜತೆ ಮಾತನಾಡುವ. ನವೆಂಬರ್ ೭ ರ ೨ ಗಂಟೆ ಒಳಗೆ ನಿಮ್ಮ ಬೇಡಿಕೆಗೆ ಸರ್ಕಾರ ಪರಿಹಾರ ನೀಡುತ್ತದೆ ಎಂದು ರೈತರಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ರೈತರು, ನಾವು ಬೆಂಗಳೂರಿಗೆ ಬರುವುದಿಲ್ಲ, ನಮ್ಮ ಪರವಾಗಿ ಡಿಸಿ-ಎಸ್‌ಪಿ ಯನ್ನು ಕರೆದು ನಿರ್ಧಾರ ಅಂತಿಮಗೊಳಿಸಿ ಎಂದರು.

Share this post:

Leave a Reply

Your email address will not be published. Required fields are marked *

You cannot copy content of this page