“ಇಂದಿರಾ ಆಹಾರ ಕಿಟ್ ಟೆಂಡ‌ರ್ ಪ್ರಕ್ರಿಯೆ ವಿಳಂಬ, ಕರ್ನಾಟಕ ಸರ್ಕಾರ ಯೋಜನೆಯ ಪ್ರಸ್ತಾಪವನ್ನು ಕೈಬಿಡುವ ಸಾಧ್ಯತೆ”

ಬೆಂಗಳೂರು :–

ಬಿಪಿಎಲ್( BPL) ಪಡಿತರದಾರರಿಗೆ ಹೆಚ್ಚುವರಿ ೫ ಕೆಜಿ ಅಕ್ಕಿಯ ಬದಲು ‘ಇಂದಿರಾ ಆಹಾರ ಕಿಟ್’ ನೀಡುವ ಯೋಜನೆಯ ಟೆಂಡರ್ ೮ ತಿಂಗಳಿಂದ ನನೆಗುದಿಗೆ ಬಿದ್ದಿದ್ದು, ಈ ಯೋಜನೆ ಕೈಬಿಟ್ಟು ೧೦ ಕೆಜಿ ಅಕ್ಕಿಯನ್ನೇ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

ಇಂದಿರಾ ಆಹಾರ ಕಿಟ್‌ನಲ್ಲಿ ಪಡಿತರದಾರರಿಗೆ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ನೀಡುವ ಯೋಜನೆಯನ್ನು ಸರ್ಕಾರ ಈ ಹಿಂದೆ ಪ್ರಸ್ತಾಪಿಸಿತ್ತು. ಇದಕ್ಕೆ ಮಾಸಿಕ ₹೫೫೦ ಕೋಟಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಿದೆ.

Share this post:

Leave a Reply

Your email address will not be published. Required fields are marked *

You cannot copy content of this page