“ಕೆಲವು ಕಾರ್ಯಗಳಿಗೆ ಹಲವು ನಿಯಮಗಳಿವೆ”
ಅನೇಕ ಕೆಲಸಗಳನ್ನು ಇಂತಹದ್ದೇ ಸಮಯದಲ್ಲಿ ಮಾಡಬೇಕು ಎನ್ನುವ ಮಾತು ಕೂಡ ಇದೆ. ಇದಕ್ಕೆ ಸಂಬಂಧಿಸಿ ಹಿರಿಯರು ದಿನನಿತ್ಯದ ಕೆಲಸ ಗಳಿಗೆ
ಒಂದಿಷ್ಟು ನಿಯಮಗಳನ್ನು ಹೇಳುತ್ತಲೇ ಇರುತ್ತಾರೆ. ಕೆಲವು ದಿನಗಳಂದು ಕೂದಲಿಗೆ ಕತ್ತರಿ ಹಾಕಬಾರದು. ಉಗುರುಗಳನ್ನು ನಿರ್ದಿಷ್ಟ ದಿನದಂದು ಕತ್ತರಿಸಿಕೊಳ್ಳಬಾರದು. ಸಂಜೆ ಹೊತ್ತು ಉಗುರು ತೆಗೆಯಬಾರದು ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ಶಾಸ್ತ್ರಗಳ ಪ್ರಕಾರ, ಸೋಮವಾರ ಉಗುರುಗಳನ್ನು ಕತ್ತರಿಸುವುದು ಶುಭ. ಸೋಮವಾರ ಶಿವ, ಚಂದ್ರ ಮತ್ತು ಮನಸ್ಸಿನೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ, ಈ ದಿನದಂದು ಉಗುರುಗಳನ್ನು ಕತ್ತರಿಸುವುದರಿಂದ ಅಜ್ಞಾನದಿಂದ ಮುಕ್ತಿ ಸಿಗುತ್ತದೆ ಎನ್ನಲಾಗಿದೆ.
ಮಂಗಳವಾರ ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಈ ದಿನ ಹನುಮಂತ ದೇವರಿಗೆ ಉಪವಾಸ ಮಾಡುವ ಜನರು ಉಗುರುಗಳನ್ನು ಕತ್ತರಿಸಬಾರದು ಎನ್ನಲಾಗಿದೆ. ಆದ್ದರಿಂದ ಮಂಗಳವಾರ ಹನುಮಂತನನ್ನು ಪೂಜಿಸುವವರು ಉಗುರು ಕತ್ತರಿಸದಿದ್ದರೆ ಒಳ್ಳೆಯದು.
ಬುಧವಾರ ಉಗುರು ಕತ್ತರಿಸಲು ಶುಭ ದಿನ. ಈ ದಿನ ಉಗುರುಗಳನ್ನು ಕತ್ತರಿಸುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ, ವೃತ್ತಿ ಪ್ರಗತಿ ಮತ್ತು ವ್ಯವಹಾರದಲ್ಲಿ ಯಶಸ್ಸು ದೊರೆಯುತ್ತದೆ.
ಗುರುವಾರ ಗುರು ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಉಗುರು, ಕೂದಲು ಮತ್ತು ಗಡ್ಡವನ್ನು ಕತ್ತರಿಸುವುದರಿಂದ ಸಮಸ್ಯೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ದಿನ ಉಗುರುಗಳನ್ನು ಕತ್ತರಿಸಬಾರದು ಎನ್ನಲಾಗಿದೆ.
ಶುಕ್ರವಾರ ಉಗುರು ಕತ್ತರಿಸಲು ಶುಭ ದಿನ. ಈ ದಿನ ಉಗುರು ಕತ್ತರಿಸುವುದರಿಂದ ಲಕ್ಷ್ಮಿ ದೇವಿಯನ್ನು ಸಂತೃಪ್ತಿಗೊಳಿಸಲಾಗುತ್ತದೆ ಎಂದು ನಂಬಲಾಗಿದೆ. ಇದು ಸಂಪತ್ತು, ಸಮೃದ್ಧಿ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ.

ಜ್ಯೋತಿಷ್ಯದ ಪ್ರಕಾರ, ಶನಿವಾರ ಉಗುರು, ಕೂದಲು ಮತ್ತು ಗಡ್ಡವನ್ನು ಕತ್ತರಿಸುವುದರಿಂದ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಇದಕ್ಕೆ ಶನಿ ಗ್ರಹ ಕಾರಣವಾಗಿರಬಹುದು. ಆದ್ದರಿಂದ, ಈ ದಿನದಂದು ಉಗುರುಗಳನ್ನು ಕತ್ತರಿಸುವುದನ್ನು ನಿಷೇಧ.
ಭಾನುವಾರ ಉಗುರು ಕತ್ತರಿಸುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ವ್ಯಕ್ತಿಯ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಯಶಸ್ಸಿಗೆ
ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದು ನಂಬಿಕೆ.