ಚಿಕ್ಕೋಡಿ :–
ವಕೀಲರ ಮೇಲೆ ಸುಳ್ಳು ದೂರು ದಾಖಲಿಸುವಾಗ ಪೋಲೀಸರು ವಿಚಾರಣೆ ನಡೆಸಿ ನಂತರ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ವಕೀಲರ ಸಂಘದಿಂದ ಶುಕ್ರವಾರ ನ್ಯಾಯಾಲಯ ಬಹಿಷ್ಕರಿಸಲಾಯಿತು.

ಇನ್ನು ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲೆ ಅವರನ್ನು ಭೇಟಿಯಾಗಿ, ಈಚೆಗೆ ವಕೀಲರ ಮೇಲೆ ಹಲ್ಲೆ ಹಾಗೂ ಸುಳ್ಳು ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಸಾಮಾನ್ಯ ಜನರಂತೂ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೋಲಿಸ್ ಇಲಾಖೆ ವಿಚಾರಣೆ ನಡೆಸದೆ ಕೂಡಲೇ ಕ್ರಮ ಕೈಗೊಳ್ಳಬಾರದು. ಪ್ರಕರಣದ ಬಗ್ಗೆ ವಿಚಾರಿಸಿ ನಂತರ ಪ್ರಕರಣ ದಾಖಲಿಸಿಕೊಳ್ಳಬೇಕು. ಪೋಲೀಸ್ ಠಾಣೆಗೆ ಆಗಮಿಸುವ ವಕೀಲರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ವಕೀಲರ ಸಂಘದಿಂದ ಒಕ್ಕೋರಲಿನಿಂದ ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ, ರಮೇಶ ಉತ್ತೂರೆ,ಮಂಜುನಾಥ ದೊಡಭಂಗಿ,ಎ.ಬಿ ಪಾಟೀಲ, ಸುಭಾಷ ಖೋತ,ಅನ್ನಪೂರ್ಣ ಚೌಗಲಾ , ಎಮ್. ಎಸ್ ಪಾಟೀಲ ಸೇರಿ ವಕೀಲರು ಉಪಸ್ಥಿತರಿದ್ದರು.





