ಬೆಳಗಾವಿ :–
ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ್ ಜಿಲ್ಲೆಯ ರಹತಾ ತಾಲೂಕಿನ ಶಿರ್ಡಿ ಪಟ್ಟಣದಲ್ಲಿ ದಿನಾಂಕ:30 ಜನೇವರಿ ಯಿಂದ 01 ಪೇಬ್ರುವರಿ 2026 ವರೆಗೆ ಶಿರ್ಡಿ-ಮಹಾರಾಷ್ಟ್ರ ದಲ್ಲಿ ಮುಕ್ತಾಯಗೊಂಡ. 14ನೇ ಸಬ್ ಜೂನಿಯರ ರಾಷ್ಟ್ರೀಯ ಲಂಗಡಿ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಬಾಲಕಿಯರ ತಂಡಕ್ಕೆ ಮೂರನೇ ಸ್ಥಾನ ದೊರೆತಿದೆ.

ಸಬ್ ಜೂನಿಯರ್ ಬಾಲಕಿಯ ತಂಡ:ಐಶ್ಚರ್ಯ ನರೋಟೆ ನಾಯಕಿ,ಅಮೃತಾ ಹೀರೆಮಠ, ಉಪನಾಯಕಿ,ಸ್ನೇಹಾ ಬಾನಸೆ,ಅನ್ನಪೂರ್ಣ ಪೂಜಾರಿ,ಸರಸ್ವತಿ ಬಾನಸೆ,ಲಕ್ಕವ್ವಾ ಪೂಜೇರಿ,ಸರಸ್ವತಿ ಹಣ ಗಂಡಿ,ಅಂಜಲಿ ಖೋತ, ರತ್ನಾ ಮಗದುಮ,ಸಿದ್ಧಿ ಗಿರವೆ,ಸೃಷ್ಠಿ ಮೋಹಿತೆ ಹಾಗೂ ಪೂರ್ವಿ ಖೋತ, ತರಬೇತಿ ದಾರಾದ ಶ್ರೀ ಮಹಾದೇವ ಕೊರವ.ತಂಡದ ವ್ಯವಸ್ಥಾಪಕರಾದ ಸೌ ಅನಿತಾ ಕೋಳಿ.
ಕರ್ನಾಟಕ ರಾಜ್ಯ ಲಂಗಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶ್ರೀ ಎಮ್.ಕೆ.ಶಿರಗುಪ್ಪೆ ಇವರ ನೇತ್ರತ್ವದಲ್ಲಿ ತಂಡದ ಕಾರ್ಯ ಯಶಸ್ವಿಯಾಗಿದೆ. ಬೆಳಗಾವಿ ಜಿಲ್ಲಾ ಲಂಗಡಿ (ಕುಂಟಾಟ) ಅಸೋಸಿಯೇಷನ್ ಬೆಳಗಾವಿ.ಅಧ್ಯಕ್ಷರು ಶ್ರೀ ಬಸವಪ್ರಸಾದ ಜೊಲ್ಲೆ,ರಾಜ್ಯ ಲಂಗಡಿ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆ,ಲಂಗಡಿ ಫೇಡರೇಶನ್ ಅಧ್ಯಕ್ಷರು ಹಾಗೂ ಮಾಜಿ ಸಂಸದರು ರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ ಇವರು ದೂರವಾಣಿ ಮೂಲಕ ವಿಜೇತ ತಂಡದ ಆಟಗಾರಿಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





